ಸ್ನಾತಕೋತ್ತರ ಪದವೀಧರರಾದ ಇವರು ಆರು ವರ್ಷಗಳಿಂದ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಮೂರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. 40 ಎಕರೆ ಜಮೀನಿನಲ್ಲಿ 6 ಎಕರೆಯಲ್ಲಿ ಸಮಗ್ರ ಕೃಷಿಪದ್ಧತಿ ಅನುಸರಿಸಿದ್ದಾರೆ. 6 ಎಕರೆಯಲ್ಲಿ 2ಸಾವಿರ ಪೇರಲ, 1ಸಾವಿರ ಶ್ರೀಗಂಧ, 400 ಸಾಗವಾನಿ, 1ಸಾವಿರ ರಕ್ತಚಂದನ, 1ಸಾವಿರ ಮಹಾಗೋಣಿ, 250 ತೆಂಗು, ಮಾವು, ಹೆಬ್ಬೇವು, ನುಗ್ಗೆ, ಕರಿಬೇವು, ಸೀತಾಫಲ ಸಸಿಗಳನ್ನು ಬೆಳೆಸಿದ್ದಾರೆ. ಎಲ್ಲದರಿಂದಲೂ ಲಾಭ ಪಡೆಯುತ್ತಿದ್ದಾರೆ. ಉಳಿದ ಜಮೀನಿನಲ್ಲಿ ಕಬ್ಬು, ಮೆಣಸಿನಕಾಯಿ ಬೆಳೆಯುತ್ತಿದ್ದಾರೆ.