‘ಜಿಲ್ಲಾ ಪಂಚಾಯ್ತಿಯು ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಉದ್ಯೋಗ ನೀಡುತ್ತಿದೆ. ಅಲ್ಲದೇ, ವಿವಿಧ ಇಲಾಖೆಯ ಹಲವು ಯೋಜನೆಗಳಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಗ್ರಾಮೀಣ ಭಾಗದ ಜನರು ವಲಸೆ ಹೋಗದಿರುವುದೇ ಸೂಕ್ತ. ಸ್ವಗ್ರಾಮದಲ್ಲಿಯೇ ನೆಲಸಿ, ಕುಟುಂಬದವರೊಂದಿಗೆ ಉದ್ಯೋಗ ನಿರ್ವಹಿಸಿದಲ್ಲಿ ಗ್ರಾಮದ ಅಭಿವೃದ್ಧಿ ಜೊತೆಗೆ ಕುಟುಂಬವು ಆರ್ಥಿಕವಾಗಿ ಸದೃಢವಾಗುತ್ತದೆ’ ಎಂದು ಹೇಳಿದರು.