ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು, ನಮಗೆ ಸರಿಯಾದ ಪರಿಹಾರ ದೊರೆತಿಲ್ಲ. ಮನೆ ಬೀಳದವರಿಗೆ ಪರಿಹಾರ ದೊರೆತಿದೆ. ಆದ್ದರಿಂದ ಕೂಡಲೇ ಮನೆ ಇಲ್ಲದವರಿಗೆ ಮನೆ ನಿರ್ಮಿಸಿ ತಗಡಿನ ಶೆಡ್ನ ವಾಸದಿಂದ ಮುಕ್ತಿಗೊಳಿಸಬೇಕು. ಈಗಾಗಲೇ ಹಲವಾರು ಸಲ ಗ್ರಾಮ ಪಂಚಾಯ್ತಿಗೆ, ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.