ಜಿಲ್ಲೆಯ ಅಡವಿಸೋಮಾಪುರ ತಾಂಡಾ, ಪಾಪನಾಶಿ, ಸಿಂಗಟರಾಯನಕೇರಿ ತಾಂಡಾದ ಒಟ್ಟು 25 ಪ್ರಯಾಣಿಕರು ಅಂದು ಬಸ್ನಲ್ಲಿ ಗದುಗಿಗೆ ಬಂದು ಇಳಿದುಕೊಂಡಿದ್ದರು. ಇವರಲ್ಲಿಅಡವಿ ಸೋಮಾಪೂರ ತಾಂಡಾದಲ್ಲಿನ 9 ಜನರನ್ನು, ಪಾಪನಾಶಿಯ ಇಬ್ಬರು ಹಾಗೂ ಒಂದು ಮಗುವನ್ನು ಭಾನುವಾರ ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿದೆ. ಇವರಿಗೆ ಆರೋಗ್ಯ ಪರೀಕ್ಷೆ ನಡೆಸಲಾಗಿದ್ದು, ಮನೆಯಲ್ಲಿಯೇ ನಿಗದಿತ ಅವಧಿಯವರೆಗೆ ಪ್ರತ್ಯೇಕವಾಗಿ ಯಾರ ಸಂಪರ್ಕಕ್ಕೆ ಬರದಂತೆ ಇರಲು ಸೂಚಿಸಿ, ನಿಗಾವಹಿಸಲಾಗಿದೆ.