ಮಹಿಳಾ ಘಟಕದಿಂದ ಅನೇಕ ವಿಚಾರ ಸಂಕಿರಣ ಕಾರ್ಯಾಗಾರ ಹಮ್ಮಿಕೊಂಡು ಮಹಿಳೆಯರ ಕೌಶಲಾಭಿವೃದ್ಧಿಗೆ ಕ್ರಮವಹಿಸಲಾಗಿದೆ. ಈ ವರ್ಷ ವಸ್ತುಪ್ರದರ್ಶನ ಹಮ್ಮಿಕೊಂಡು ಅವರಿಗೆ ಮಾರುಕಟ್ಟೆ ಜ್ಞಾನ ಪರಿಚಯಿಸಲಾಗಿದೆ
–ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ಮಹಿಳಾ ಘಟಕದ ಅಧ್ಯಕ್ಷೆ
ಮಹಿಳೆ ಅಬಲೆ ಅಲ್ಲ ಸಬಲೆ
‘ಮಹಿಳೆ ಅಬಲೆ ಅಲ್ಲ ಸಬಲೆ. ಮಹಿಳೆ ಮಹಾರಾಣಿಯಾಗಿ ಕೆಲಸ ಮಾಡಿದ್ದಾಳೆ. ದೇಶವನ್ನೂ ಆಳಿದ್ದಾರೆ. ನಮ್ಮ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಕೂಡ ಮಹಿಳೆಯಾಗಿದ್ದಾರೆ’ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ‘ಪ್ರತಿಯೊಬ್ಬರು ಮಹಿಳೆ ಕೂಡ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಯೋಗ ವ್ಯಾಯಾಮ ಮಾಡುವುದರಿಂದ ನೆಮ್ಮದಿಯಿಂದ ಇರಬಹುದು. ನೋವುಗಳು ಬಂದಾಗ ಎದುರಿಸಿ ಸಾಧನೆಯ ಕಡೆಗೆ ಗಮನ ಕೊಡಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ’ ಎಂದು ಹೇಳಿದರು.