ಲಕ್ಷ್ಮೇಶ್ವರಕ್ಕೆ ಬಂದ ನಂತರ ಅವರು ಇಲ್ಲಿನ ಜನರಲ್ಲಿ ಅಜ್ಞಾನ, ಅಂಧಕಾರಗಳನ್ನು ಹೊಡೆದೋಡಿಸುವ ಸಲುವಾಗಿ ಪ್ರತಿದಿನ ಉಪನ್ಯಾಸ ಹಮ್ಮಿಕೊಳ್ಳುತ್ತಾರೆ. ಜನರ ಮೈಮೇಲೆ ಬರುತ್ತಿದ್ದ ದೆವ್ವ, ಭೂತಗಳನ್ನು ತಮ್ಮ ತಪಸ್ಸಿನ ಶಕ್ತಿಯಿಂದ ದೂರ ಮಾಡಿ ಅವರನ್ನು ಉದ್ಧರಿಸುತ್ತಾರೆ. ಇವರ ಬೋಧನೆಗೆ ಮನಸೋತ ಸಾವಿರಾರು ಜನರು ಇವರ ಶಿಷ್ಯರಾಗುತ್ತಾರೆ. ಹಿಂದೂ, ಮುಸ್ಲಿಂ ಎನ್ನದೆ ಎಲ್ಲ ಜಾತಿ ಜನರು ದೂದಪೀರಾಂ ಅವರ ಹತ್ತಿರ ಬಂದು ಗುಣ ಕಂಡಿದ್ದಾರೆ. ಲಕ್ಷ್ಮೇಶ್ವರದಲ್ಲಿಯೇ ವಿಧಿವಶರಾದ ನಂತರ ಅವರ ಶಿಷ್ಯರು ಗದ್ದುಗೆ ನಿರ್ಮಿಸುತ್ತಾರೆ. ಅದೇ ಇಂದು ದೂದಪೀರಾಂ ದರ್ಗಾ ಎಂದು ಪ್ರಸಿದ್ಧಿ ಪಡೆದಿದೆ.