ಮೆಣಸಗಿ, ಅಸೂಟಿ, ಗುಳಗುಂದಿ ಸೇರಿದಂತೆ ಯೋಧನ ಪ್ರಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರುವ ಮಾರ್ಗದಲ್ಲಿ ನೂರಾರು ಗ್ರಾಮಸ್ಥರು,ಶಾಲಾ, ಕಾಲೇಜು ವಿದ್ಯಾರ್ಥಿಗಳು, ಹಿರಿಯರು, ಯುವಕರು, ಮಹಿಳೆಯರು ರಸ್ತೆಯಂಚಿನಲ್ಲಿ ನಿಂತು ಗೌರವ ಸಲ್ಲಿಸಿದರು. ವೀರ ಯೋಧ ವೀರೇಶ ಅಮರ್ ರಹೇ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸಿದರು.