ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ‘ಇಂದು ಸಮಾಜದಲ್ಲಿ ಸತ್ಯ, ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಸಮಾಜ ಹಣ ಮತ್ತು ಅಧಿಕಾರ ಬಲಕ್ಕೆ ಮಣೆ ಹಾಕುತ್ತಿದೆ. ಜನರಲ್ಲಿ ನೈತಿಕ ಪ್ರಜ್ಞೆ ಬೆಳೆಸುವ ಮತ್ತು ಭ್ರಷ್ಟಾಚಾರವನ್ನು ಬೇರು ಸಮೇತ ಮೂಲೋತ್ಪಾಟನೆ ಮಾಡುವ ತುರ್ತು ಅಗತ್ಯ ಇದೆ. ಶುದ್ಧ ರಾಜಕಾರಣ ಬಿತ್ತಿ ಬೆಳೆಸುವ ಕೆಲಸವನ್ನು ಪ್ರತಿಷ್ಠಾನ ಆರಂಭಿಸಲಿರುವ ರಾಜ್ಯಶಾಸ್ತ್ರ ಅಧ್ಯಯನ ಕೇಂದ್ರದಿಂದ ಆಗಲಿ’ ಎಂದು ಆಶಯ ವ್ಯಕ್ತಪಡಿಸಿದರು.