ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ: ವೃದ್ಧೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಂದಾಯ ನಿರೀಕ್ಷಕ ನಿಂಗಪ್ಪ ಅಡಿವೆಣ್ಣ ವರ, ಗ್ರಾಮ ಲೇಕ್ಕಾಧಿಕಾರಿ ಎನ್.ಆರ್.ಕನೋಜಿ, ಹಾಗೂ ಪಿಎಸ್ಐ ವಿನೋದ ಪೂಜಾರಿ ಮಾಡಲಗೇರಿ ಗ್ರಾಮದ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮಳೆ ಯಿಂದಾಗಿ ಗ್ರಾಮದಲ್ಲಿ ಬಿದ್ದಿರುವ 20ಕ್ಕೂ ಹೆಚ್ಚು ಮನೆಗಳನ್ನು ಪರಿಶೀಲನೆ ಮಾಡಿ, ಸರ್ಕಾರಕ್ಕೆ ವರದಿ ಕೊಡುವುದರ ಜೊತೆಗೆ ಪರಿಹಾರವನ್ನು ವಿತರಣೆ ಮಾಡಲಾಗುವುದು ಎಂದರು.