<p>ಬೆಳವಣಿಕಿ (ರೋಣ): ಸಮೀಪದ ಯಾವಗಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹೊನ್ನಕೇರಿ ಮಲ್ಲಯ್ಯ ಶಿಬಾರಗಟ್ಟಿ, ಬಸವಣ್ಣ ಮೂರ್ತಿ, ನಾಗದೇವತೆ, ಮಲ್ಲಯ್ಯನ ಕಂಚಿನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಏ.27ರಿಂದ 29ರವರೆಗೆ ನಡೆಯಲಿವೆ.</p>.<p>ಸಿದ್ದಯ್ಯ ಹಿರೇಮಠ ನೇತೃತ್ವ ವಹಿಸುವರು. ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೈಲಾಪೂರ ಬಸಪ್ಪ ಪೂಜಾರ ಉಪಸ್ಥಿತರಿರುವರು.</p>.<p>ಏ.27ರಂದು ಬೆಳಿಗ್ಗೆ 9ಕ್ಕೆ ಕುಂಭಮೇಳ, ಡೊಳ್ಳಿನ ಮೇಳ, ಕರಡಿಮಜಲು, ಭಜನಾ ಮೇಳದೊಂದಿಗೆ, ಗುರುದ್ವಯರ ನೇತೃತ್ವದಲ್ಲಿ ಮೂರ್ತಿ ಪುರಪ್ರವೇಶ ನಂತರ ಮಹಾಪ್ರಸಾದ ನೆರವೇರುವುದು. ರಾತ್ರಿ 9.30ಕ್ಕೆ ಬೀರಲಿಂಗೇಶ್ವರ ಭರಮಲಿಂಗೇಶ್ವರ ತಂಡದವರಿಂದ ಶಾಂಭವಿ ಕಲಾ ತಂಡದವರಿಂದ ಬಯಲಾಟ ಪದ ಕಾರ್ಯಕ್ರಮ ನಡೆಯಲಿದೆ.</p>.<p>ಏ.28ರಂದು ಮೂರ್ತಿಗಳ ಜಲವಾಸ, ವಸ್ತ್ರಾಭರಣ, ಜ್ಞಾನವಾಸ, ಪುಷ್ಪವಾಸ, ಶಯನವಾಸ, ವಾಸ್ತುಶಾಂತಿ, ವಿವಿಧ ಕಾರ್ಯಕ್ರಮಗಳು ನಡೆಯಲಿವೆ.</p>.<p>ಏ.29ರಂದು ಬೆಳಿಗ್ಗೆ 6ಕ್ಕೆ ಚನ್ನಮಲ್ಲ ಶಿವಾಚಾರ್ಯ ಅವರಿಂದ ಎಲ್ಲ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ, ನಂತರ ರುದ್ರಾಭಿಷೇಕ, ನವಗ್ರಹ ಶಾಂತಿ, ಮುಂತಾದ ಕಾರ್ಯಕ್ರಮ ನಡೆಯುತ್ತವೆ ಎಂದು ಪ್ರಕಟಣೆ ತಿಳಿಸಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260422-23-1231606047</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳವಣಿಕಿ (ರೋಣ): ಸಮೀಪದ ಯಾವಗಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹೊನ್ನಕೇರಿ ಮಲ್ಲಯ್ಯ ಶಿಬಾರಗಟ್ಟಿ, ಬಸವಣ್ಣ ಮೂರ್ತಿ, ನಾಗದೇವತೆ, ಮಲ್ಲಯ್ಯನ ಕಂಚಿನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಏ.27ರಿಂದ 29ರವರೆಗೆ ನಡೆಯಲಿವೆ.</p>.<p>ಸಿದ್ದಯ್ಯ ಹಿರೇಮಠ ನೇತೃತ್ವ ವಹಿಸುವರು. ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೈಲಾಪೂರ ಬಸಪ್ಪ ಪೂಜಾರ ಉಪಸ್ಥಿತರಿರುವರು.</p>.<p>ಏ.27ರಂದು ಬೆಳಿಗ್ಗೆ 9ಕ್ಕೆ ಕುಂಭಮೇಳ, ಡೊಳ್ಳಿನ ಮೇಳ, ಕರಡಿಮಜಲು, ಭಜನಾ ಮೇಳದೊಂದಿಗೆ, ಗುರುದ್ವಯರ ನೇತೃತ್ವದಲ್ಲಿ ಮೂರ್ತಿ ಪುರಪ್ರವೇಶ ನಂತರ ಮಹಾಪ್ರಸಾದ ನೆರವೇರುವುದು. ರಾತ್ರಿ 9.30ಕ್ಕೆ ಬೀರಲಿಂಗೇಶ್ವರ ಭರಮಲಿಂಗೇಶ್ವರ ತಂಡದವರಿಂದ ಶಾಂಭವಿ ಕಲಾ ತಂಡದವರಿಂದ ಬಯಲಾಟ ಪದ ಕಾರ್ಯಕ್ರಮ ನಡೆಯಲಿದೆ.</p>.<p>ಏ.28ರಂದು ಮೂರ್ತಿಗಳ ಜಲವಾಸ, ವಸ್ತ್ರಾಭರಣ, ಜ್ಞಾನವಾಸ, ಪುಷ್ಪವಾಸ, ಶಯನವಾಸ, ವಾಸ್ತುಶಾಂತಿ, ವಿವಿಧ ಕಾರ್ಯಕ್ರಮಗಳು ನಡೆಯಲಿವೆ.</p>.<p>ಏ.29ರಂದು ಬೆಳಿಗ್ಗೆ 6ಕ್ಕೆ ಚನ್ನಮಲ್ಲ ಶಿವಾಚಾರ್ಯ ಅವರಿಂದ ಎಲ್ಲ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ, ನಂತರ ರುದ್ರಾಭಿಷೇಕ, ನವಗ್ರಹ ಶಾಂತಿ, ಮುಂತಾದ ಕಾರ್ಯಕ್ರಮ ನಡೆಯುತ್ತವೆ ಎಂದು ಪ್ರಕಟಣೆ ತಿಳಿಸಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260422-23-1231606047</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>