‘ಗದಗ ಈಚೆಗೆ ನಿರ್ಮಾಣಗೊಂಡ ಜಿಲ್ಲೆಯಾಗಿದ್ದು, ಅದರ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಿಗೆ ವಿಶೇಷ ಅನುದಾನವನ್ನು ಬಜೆಟ್ನಲ್ಲಿ ಮೀಸಲಿಡಬೇಕಿತ್ತು. ಜೊತೆಗೆ ಜಿಲ್ಲೆಯಲ್ಲಿ ಕೃಷಿ, ನೀರಾವರಿ, ಪರಿಸರ ರಕ್ಷಣೆಗೆ ಪೂರಕವಾದ ಮತ್ತು ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಯಾವುದಾದರೂ ಪ್ರತ್ಯೇಕ ಯೋಜನೆ ಘೋಷಿಸಬೇಕಾಗಿತ್ತು. ಕೊನೆಯ ಪಕ್ಷ ಕನ್ನಡ ನಾಡು- ನುಡಿ, ನೆಲ-ಜಲ, ಪರಿಸರ, ಕೋಮು ಸೌಹಾರ್ದಕ್ಕಾಗಿ ಅಹರ್ನಿಶಿ ಶ್ರಮಿಸಿದ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೆಸರಿನಲ್ಲಿ ‘ಸ್ಮೃತಿ ಭವನ’ ನಿರ್ಮಿಸಲಾದರೂ ಅನುದಾನ ನೀಡಿ ಉತ್ತರ ಕರ್ನಾಟಕದ ಈ ಒಬ್ಬ ಜನಸಾಮಾನ್ಯರ ಸ್ವಾಮೀಜಿಯನ್ನಾದರೂ ದಕ್ಷಿಣದ ಆದಿಚುಂಚನಗಿರಿ, ತುಮಕೂರು, ಪೇಜಾವರ ಶ್ರೀಗಳನ್ನು ಗೌರವಿಸಿದಂತೆ ಗೌರವಿಸಬಹುದಾಗಿತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.