ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಬದುಕಿನ ಚಿತ್ರ ಪ್ರದರ್ಶನ

Last Updated 14 ಅಕ್ಟೋಬರ್ 2019, 13:31 IST
ಅಕ್ಷರ ಗಾತ್ರ

ಶಿವಮೊಗ್ಗ:ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದ್ದ ಶಾಂತಿ, ಅಹಿಂಸೆ, ಸತ್ಯ ಎಂಬ ಅಂಶಗಳನ್ನು ಅಸ್ತ್ರವನ್ನಾಗಿ ಮಾರ್ಪಡಿಸಿದ ಗಾಂಧೀಜಿ ಇವುಗಳನ್ನು ಬ್ರಿಟಿಷರ ವಿರುದ್ಧ ಪ್ರಯೋಗಿಸಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು ಎಂದುಜಿಲ್ಲಾ ಪಂಚಾಯಿತಿ ಎಂ.ಎಲ್. ವೈಶಾಲಿ ಹೇಳಿದರು.

ನಗರದ ಕೆಎಸ್ಆರ್‌ಟಿಸಿ ಬಸ್‍ ನಿಲ್ದಾಣದಲ್ಲಿವಾರ್ತಾ ಇಲಾಖೆ, ಜಿಲ್ಲಾಡಳಿತದ ಸಹಯೋಗದಲ್ಲಿ150ನೇ ಗಾಂಧೀಜಿ ಜಯಂತ್ಯುತ್ಸವದ ಅಂಗವಾಗಿ ಸೋಮವಾರದಿಂದಮೂರು ದಿನಗಳ ಕಾಲ ನಡೆಯಲಿರುವ ಗಾಂಧೀಜಿಅವರ ಜೀವನ ಮತ್ತು ಸಾಧನೆ ಬಿಂಬಿಸುವ ಅಪರೂಪದ ಚಿತ್ರಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸತ್ಯಾಗ್ರಹ, ಅಸಹಕಾರದಂತಹ ಪ್ರತಿಭಟನೆಗಳೊಂದಿಗೆ ವಿಶ್ವದ ಗಮನ ಸೆಳೆದ ಗಾಂಧೀಜಿ ನವಯುಗದ ನೇತಾರರಾಗಿ ಹೊರಹೊಮ್ಮಿದರು. ಗಾಂಧೀಜಿ ಅವರಜೀವನ ಮತ್ತು ಅವರು ನಾಡಿಗೆ ನೀಡಿದ ಸಂದೇಶ ಸಾರ್ವಕಾಲಿಕ ಎಂದರು.

ಈ ಚಿತ್ರಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಭೇಟಿ ಕೊಟ್ಟ ಸ್ಥಳಗಳು, ದೇಶದಾದ್ಯಂತ ನಡೆಸಿದ ಸಭೆ-ಸಮಾರಂಭಗಳು, ಹಿರಿಯ ನೇತಾರರೊಂದಿಗೆ ನಡೆಸಿದ ಸಭೆಗಳು, ಶೈಕ್ಷಣಿಕ ಮತ್ತು ಬಾಲ್ಯದ ಘಟನಾವಳಿಗಳು, ದೇಶ-ವಿದೇಶಗಳಲ್ಲಿ ಗಾಂಧೀಜಿ ಕಳೆದ ದಿನಗಳ ಕುರಿತು ಇತಿಹಾಸದ ಹಲವು ಘಟನೆಗಳ ಮೇಲೆ ಬೆಳಕು ಚೆಲ್ಲಲಿವೆ ಎಂದು ಹೇಳಿದರು.

ವಾರ್ತಾ ಇಲಾಖೆಯು ಬೇರೆ-ಬೇರೆ ಮೂಲಗಳಿಂದ ಸಂಗ್ರಹಿಸಿದ ಅಪರೂಪದ ಚಿತ್ರಗಳಲ್ಲಿ ಗಾಂಧೀಜಿಅವರ ಕುರಿತ ಕಪ್ಪು-ಬಿಳುಪು ಚಿತ್ರಗಳು ವೀಕ್ಷಕರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಕಣ್ಣೆದುರು ತಂದು ನಿಲ್ಲಿಸಲಿವೆಎಂದು ಅಭಿಪ್ರಾಯಪಟ್ಟರು.

ಈ ಅಪರೂಪದ ಸಂಗ್ರಹದ ಚಿತ್ರಗಳನ್ನು ಸಾರ್ವಜನಿಕರು, ಶಿಕ್ಷಣದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಗಾಂಧೀಜಿ ಅನುಯಾಯಿಗಳು, ಪೋಷಕರು, ಶಿಕ್ಷಕರು, ಮಕ್ಕಳು, ಗಾಂಧೀಜಿ ಜೀವನಾದರ್ಶಗಳ ಪರಿಪಾಲಕರು ವೀಕ್ಷಿಸುವಂತೆ ಮನವಿ ಮಾಡಿದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಸಂಚಲನಾಧಿಕಾರಿ ವಿ. ಸತೀಶ್, ಸಿದ್ದೇಶ್, ಆರ್. ಮಾರುತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT