ಮಾಜಿ ಸಚಿವ ಕಿಮ್ಮನೆ ರತ್ನಾಕರ್, ‘ಕುವೆಂಪು ಹಾದಿಯಾಗಿ ಈ ನಾಡಿನ ಖ್ಯಾತನಾಮ ಲೇಖಕರು ಶಾಂತವೇರಿ ಗೋಪಾಲಗೌಡರ ಬದುಕು, ವ್ಯಕ್ತಿತ್ವದ ಬಗ್ಗೆ ಲೇಖನ, ಪದ್ಯ ಬರೆದಿದ್ದಾರೆ. ಅವರ ಹೋರಾಟದ ಜೀವನವೇ ಪ್ರತಿಯೊಬ್ಬರಿಗೂ ಮಾದರಿ. ಅವರ ವ್ಯಕ್ತಿತ್ವ ಯುವಜನಾಂಗಕ್ಕೆ ಹೊಸ ದಾರಿ ತೋರಿಸುತ್ತದೆ. ಅಧಿಕಾರ, ಮಂತ್ರಿ ಪದವಿಗಾಗಿ ಕಿತ್ತಾಡುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಗೋಪಾಲಗೌಡರು ನಮಗೆ ಮತ್ತೆ, ಮತ್ತೆ ನೆನಪಾಗುತ್ತಾರೆ’ ಎಂದರು.