ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ: ಪಟ್ಟಣದಲ್ಲಿ 48 ದಿನ ಗಣಪತಿ ಉತ್ಸವ

Published 19 ಸೆಪ್ಟೆಂಬರ್ 2023, 13:32 IST
Last Updated 19 ಸೆಪ್ಟೆಂಬರ್ 2023, 13:32 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದ ಗಣಪತಿ ಸೇವಾ ಸಮಿತಿ ಆಶ್ರಯದಲ್ಲಿ 72ನೇ ವರ್ಷದ ಗಣಪತಿ ಮೂರ್ತಿಯನ್ನು ಸೋಮವಾರ ಪ್ರತಿಷ್ಠಾಪಿಸಲಾಯಿತು.

ಕಲಾವಿದ ಸಿ.ವಿ. ಪ್ರಸನ್ನ ತಯಾರಿಸಿರುವ 9 ಅಡಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪಿಸಿ, ಮಂಗಳವಾದ್ಯದ ನಾದದೊಂದಿಗೆ ಅರ್ಚಕ ಬಾಲಕೃಷ್ಣ ಭಟ್ ಪೂಜೆ ನೆರವೇರಿಸುವುದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಗಣಪತಿ ವಿಗ್ರಹ ಪ್ರತಿಷ್ಠಾಪಿಸಲಾಗಿದ್ದು, ಗಣಪತಿ ಸಮುದಾಯ ಭವನದ ಅಭಿವೃದ್ಧಿಗೆ ಪುರಸಭೆ ವತಿಯಿಂದ ಅನುದಾನ ನೀಡಲಾಗುವುದು ಎಂದರು.

ಕಾಂಗ್ರೆಸ್ ಮುಖಂಡ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ‘ಅಕ್ಟೋಬರ್ 6 ರಂದು ನನ್ನ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ಮೇಳವನ್ನು ಗಣಪತಿ ಪೆಂಡಾಲ್‍ನಲ್ಲಿ ಏರ್ಪಡಿಸಲಾಗುವುದು’ ಎಂದು ಹೇಳಿದರು.
ಪ್ರಸನ್ನಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್. ಆಶೋಕ್ ಮಾತನಾಡಿ, 48 ದಿನ ಮಧ್ಯಾಹ್ನದ  ದಾಸೋಹ ನಡೆಯಲಿದೆ. ಸೆಪ್ಟೆಂಬರ್ 23 ರಿಂದ  ಬೆಳಿಗ್ಗೆ ಉಚಿತ ಯೋಗ ಶಿಬಿರ,  ಅಕ್ಟೋಬರ್ 2 ರಂದು ರಕ್ತದಾನ ಶಿಬಿರ ಏರ್ಪಡಿಸಲಾಗುವುದು ಎಂದರು.ಮಹದೇವ್ ತಂಡದ ಕಲಾವಿದರು ಭಕ್ತಿಗೀತೆ, ಭಾವಗೀತೆ ಗಾಯನ ನಡೆಸಿಕೊಟ್ಟರು.

ಕಾಂಗ್ರೆಸ್ ಮುಖಂಡ ಎಚ್.ಎಸ್. ವಿಜಯಕುಮಾರ್ ಮಾತನಾಡಿದರು. ಕತ್ತರಿಘಟ್ಟ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ ಗುರೂಜಿ, ಡಿವೈಎಸ್‍ಪಿ ಪಿ. ರವಿಪ್ರಸಾದ್, ಪೊಲೀಸ್‌ ಇನ್‌ಸ್ಪೆಕ್ಟರ್ ಕೆ.ಎಂ. ವಸಂತ್, ಮುಖಂಡ ಎ.ಸಿ. ಆನಂದ ಕುಮಾರ್, ರಾಜ್ಯರೈತಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ, ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ, ಪ್ರಸನ್ನ ಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಮಹದೇವ್, ಸಿ.ಕೆ. ಕೃಷ್ಣ, ಸಿ.ವೈ. ಸತ್ಯನಾರಾಯಣ್, ಸಿ.ಎಸ್. ಮನೋಹರ್, ನಂಜುಂಡಮೈಮ್, ರವೀಂದ್ರ, ಸಿ.ಡಿ. ರಾಜಶೇಖರ್, ಪುರಸಭಾ ಸದಸ್ಯರಾದ ಎಚ್.ಎನ್. ನವೀನ್, ಮೋಹನ್, ಸಿ.ಎನ್. ಶಶಿಧರ್, ನವೊದಯ ವಿದ್ಯಾ ಸಂಘದ ಪದಾಧಿಕಾರಿಗಳಾದ ಸುರೇಶ್, ಸಿ.ಎಸ್. ಆದಿಶೇಷಕುಮಾರ್, ಕುಂಬಾರಹಳ್ಳಿ ರಮೇಶ್, ವೆಂಕಟೇಶ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT