<p><strong>ಹಳೇಬೀಡು:</strong> ಭಗವಾನ್ ಬಾಹುಬಲಿಯ ಸಂದೇಶಗಳು ಜಗತ್ತಿಗೆ ಶಾಂತಿಯನ್ನು ಸಾರುತ್ತಿವೆ ಎಂದು ಬಾಹುಬಲಿ ಪ್ರಭಾವನ ರಥಯಾತ್ರೆಯ ಸಂಯೋಜಕ ಧರಣೇಂದ್ರ ಡಿ.ಜೈನ್ ಶಾಸ್ತ್ರಿ ಹೇಳಿದರು.</p>.<p>ಸಮೀಪದ ಅಡಗೂರು ಗ್ರಾಮಕ್ಕೆ ಸೋಮವಾರ ಬಂದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಭಾವನ ರಥಯಾತ್ರೆಯಲ್ಲಿ ಅವರು ಮಾತನಾಡಿದರು.</p>.<p>ಅಂಹಿಸಾ ತತ್ವಗಳನ್ನು ಅನುಸರಿಸಿ ಪರಸ್ಪರ ಸ್ನೇಹ ಸಹಕಾರದಿಂದ ಬದುಕಿದರೆ ದೇಶ ರಕ್ಷಣೆಗಾಗಿ ಮಾಡುವ ವೆಚ್ಚ ಉಳಿತಾಯವಾಗುತ್ತದೆ. ಇದರಿಂದ ದೇಶದ ಪ್ರಗತಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.</p>.<p>ಬಾಹುಬಲಿ ಮಹಮಸ್ತಕಾಭೀಷೇಕದ ಪ್ರಚಾರದೊಂದಿಗೆ ಅಹಿಂಸಾತತ್ವಗಳನ್ನು ಜನತೆಗೆ ಪಸರಿಸಲು ರಾಜ್ಯದ ವಿವಿಧೆಡೆ ಪ್ರಭಾವನಾ ರಥಯಾತ್ರೆಯನ್ನು ಶ್ರವಣಬೆಳಗೂಳ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೊರಡಿಸಿದ್ದಾರೆ. ಧರ್ಮ ಜಾಗೃತಿಯೊಂದಿಗೆ ನೈತಿಕ ಉತ್ಪನ್ನ ಹಾಗೂ ಸಂಸ್ಕೃತಿಯ ಸಂರಕ್ಷಣೆಯ ಉದ್ದೇಶದಿಂದ ರಥ ಸಂಚರಿಸುತ್ತದೆ ಎಂದು ವಿವರಿಸಿದರು.</p>.<p>ಮಂಗಳವಾದ್ಯದೊಂದಿಗೆ ಅಡಗೂರಿನ ಪ್ರಮುಖ ಬೀದಿಗಳಲ್ಲಿ ಪ್ರಭಾವನಾ ರಥದ ಮೆರವಣಿಗೆ ನಡೆಯಿತು. ಮಹಾವೀರ ಜೈನಸಂಘ ಅಧ್ಯಕ್ಷ ನಾಗೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡ ಎ.ಬಿ.ಕಾಂತರಾಜು ಮಾತನಾಡಿದರು.</p>.<p>ಕಾರ್ಯದರ್ಶಿ ಶಶಿಕುಮಾರ್, ರತ್ನತ್ರಯ ಮಹಿಳಾ ಸಮಾಜ ಅಧ್ಯಕ್ಷೆ ಪುಷ್ಪ ರತ್ನರಾಜು, ಕಾರ್ಯದರ್ಶಿ ಸುಧಾ ವಿಜಯ್ಕುಮಾರ್. ಅತುಲ್ ಜೈನ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೇಬೀಡು:</strong> ಭಗವಾನ್ ಬಾಹುಬಲಿಯ ಸಂದೇಶಗಳು ಜಗತ್ತಿಗೆ ಶಾಂತಿಯನ್ನು ಸಾರುತ್ತಿವೆ ಎಂದು ಬಾಹುಬಲಿ ಪ್ರಭಾವನ ರಥಯಾತ್ರೆಯ ಸಂಯೋಜಕ ಧರಣೇಂದ್ರ ಡಿ.ಜೈನ್ ಶಾಸ್ತ್ರಿ ಹೇಳಿದರು.</p>.<p>ಸಮೀಪದ ಅಡಗೂರು ಗ್ರಾಮಕ್ಕೆ ಸೋಮವಾರ ಬಂದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಭಾವನ ರಥಯಾತ್ರೆಯಲ್ಲಿ ಅವರು ಮಾತನಾಡಿದರು.</p>.<p>ಅಂಹಿಸಾ ತತ್ವಗಳನ್ನು ಅನುಸರಿಸಿ ಪರಸ್ಪರ ಸ್ನೇಹ ಸಹಕಾರದಿಂದ ಬದುಕಿದರೆ ದೇಶ ರಕ್ಷಣೆಗಾಗಿ ಮಾಡುವ ವೆಚ್ಚ ಉಳಿತಾಯವಾಗುತ್ತದೆ. ಇದರಿಂದ ದೇಶದ ಪ್ರಗತಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.</p>.<p>ಬಾಹುಬಲಿ ಮಹಮಸ್ತಕಾಭೀಷೇಕದ ಪ್ರಚಾರದೊಂದಿಗೆ ಅಹಿಂಸಾತತ್ವಗಳನ್ನು ಜನತೆಗೆ ಪಸರಿಸಲು ರಾಜ್ಯದ ವಿವಿಧೆಡೆ ಪ್ರಭಾವನಾ ರಥಯಾತ್ರೆಯನ್ನು ಶ್ರವಣಬೆಳಗೂಳ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೊರಡಿಸಿದ್ದಾರೆ. ಧರ್ಮ ಜಾಗೃತಿಯೊಂದಿಗೆ ನೈತಿಕ ಉತ್ಪನ್ನ ಹಾಗೂ ಸಂಸ್ಕೃತಿಯ ಸಂರಕ್ಷಣೆಯ ಉದ್ದೇಶದಿಂದ ರಥ ಸಂಚರಿಸುತ್ತದೆ ಎಂದು ವಿವರಿಸಿದರು.</p>.<p>ಮಂಗಳವಾದ್ಯದೊಂದಿಗೆ ಅಡಗೂರಿನ ಪ್ರಮುಖ ಬೀದಿಗಳಲ್ಲಿ ಪ್ರಭಾವನಾ ರಥದ ಮೆರವಣಿಗೆ ನಡೆಯಿತು. ಮಹಾವೀರ ಜೈನಸಂಘ ಅಧ್ಯಕ್ಷ ನಾಗೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡ ಎ.ಬಿ.ಕಾಂತರಾಜು ಮಾತನಾಡಿದರು.</p>.<p>ಕಾರ್ಯದರ್ಶಿ ಶಶಿಕುಮಾರ್, ರತ್ನತ್ರಯ ಮಹಿಳಾ ಸಮಾಜ ಅಧ್ಯಕ್ಷೆ ಪುಷ್ಪ ರತ್ನರಾಜು, ಕಾರ್ಯದರ್ಶಿ ಸುಧಾ ವಿಜಯ್ಕುಮಾರ್. ಅತುಲ್ ಜೈನ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>