‘ಬರಗಾಲದಲ್ಲಿ ಕೊಳವೆಬಾವಿ ಒಣಗಿದಾಗ ಪತ್ನಿ ಕಮಲಮ್ಮ ನೆರವಿನೊಂದಿಗೆ 1 ಕಿ.ಮೀ ದೂರದಿಂದ ನೀರು ಹೊತ್ತು ತೋಟವನ್ನು ಉಳಿಸಿಕೊಂಡಿದ್ದೆ. ಇದುವರೆಗೆ ₹12 ಲಕ್ಷ ಖರ್ಚಾಗಿತ್ತು. ಇಲ್ಲಿಯವರೆಗೂ ಯಾವುದೇ ಆದಾಯವಿಲ್ಲದ ಕಾರಣ, ಕೂಲಿ ಮಾಡುತ್ತಿದ್ದೆವು. ಮಗಳಿಗೆ ಕಷ್ಟಪಟ್ಟು ಮದುವೆ ಮಾಡಿದ್ದೆವು. ಇಬ್ಬರು ಗಂಡು ಮಕ್ಕಳು ಕೂಲಿ ಮಾಡುತ್ತಿದ್ದಾರೆ’ ಎಂದುವೀರಲಿಂಗೇಗೌಡ ಅಳಲು ತೋಡಿಕೊಂಡರು.