‘ಸರಿಯಾಗಿ ಊಟ ತಿಂಡಿ ಇಲ್ಲದೆ, ಮನೆ ಬಾಡಿಗೆ ಕಟ್ಟಲಾಗದೆ, ಇದ್ದ ಪಿಂಚಣಿ ಹಣವನ್ನೂ ಪಡೆದುಕೊಂಡು ಬಹುತೇಕ ಕಾರ್ಮಿಕರು ಬರಿಗೈ ಆಗಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸದಿದ್ದರೆ ಡಿ.ಸಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದು ಕಾರ್ಮಿಕ ಮಧು ಹೇಳಿದರು.
86 ದಿನಗಳಿಂದ ಮುಷ್ಕರ ನಡೆಸುತ್ತಿರುವ ಕಾರ್ಮಿಕರು ಸ್ಥಳದಲ್ಲೇ ಅಡುಗೆ ಮಾಡಿಕೊಂಡು, ಟೆಂಟ್ನಲ್ಲಿ ಮಲಗುತ್ತಿದ್ದಾರೆ.