ಶಾಸಕ ಪ್ರೀತಂ ಜೆ.ಗೌಡ, ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭಾಗವಹಿಸುವರು. ದ್ವಿತೀಯ ಪಿಯುಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದ ನಗರ ಪ್ರದೇಶ ಮಕ್ಕಳು ಹಾಗೂ 100ಕ್ಕೆ 99 ಅಂಕ ಗಳಿಸಿದ ಗ್ರಾಮೀಣ ಭಾಗದ ಒಟ್ಟು 290 ವಿದ್ಯಾರ್ಥಿಗಳು ಹಾಗೂ ಐಎಎಸ್, ಕೆಎಎಸ್, ಪಿಎಚ್.ಡಿ ಪಡೆದವರಿಗೂ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ನುಡಿದರು.