‘ಮನೆಯಲ್ಲಿದ್ದ ಪಾತ್ರೆಗಳು ಹಾಗೂ ಗ್ಯಾಸ್ ಸ್ಟೌ ಗೋಡೆಯ ಮಣ್ಣಿನಡಿ ಸಿಲುಕಿ ನಜ್ಜುಗುಜ್ಜಾಗಿವೆ. ಯಾವುದೇ ಸಂದರ್ಭದಲ್ಲಾದರೂ ಗೋಡೆ, ಚಾವಣಿ ಬೀಳುವ ಸ್ಥಿತಿಯಲ್ಲಿದೆ. ಕಾಲೇಜು ವ್ಯಾಸಂಗ ಮಾಡುತ್ತಿರುವ ಮಕ್ಕಳು ಕುಳಿತು ಓದುವುದಕ್ಕೂ ಸ್ಥಳ ಇಲ್ಲವಾಗಿದೆ. ಕಷ್ಟಪಟ್ಟು ದುಡಿದರೂ ಕುಳಿತು ಊಟ ಮಾಡುವುದಕ್ಕೂ ಸ್ಥಳಾವಕಾಶವೇ ಇಲ್ಲ’ ಎಂದು ಮೋಹನ್ ರಾವ್ ಅಳಲು ತೋಡಿಕೊಂಡರು.