ಘಟನೆ ವಿವರ: ರಾಜೇಗೌಡ ಹಾಗೂ ಅವರ ಪತ್ನಿ, ಜೋಳ ಬಿತ್ತನೆಗಾಗಿ ಎತ್ತಿನಗಾಡಿ ಕಟ್ಟಿಕೊಂಡು ಹೊಲಕ್ಕೆ ಹೊರಡಲು ಬೆಳಿಗ್ಗೆ ಸಿದ್ಧರಾಗಿದ್ದರು. ತಮ್ಮೊಂದಿಗೆ ಬರಲು ಇಚ್ಛಿಸಿದ ಈ ಮಕ್ಕಳನ್ನೂ ಕರೆದುಕೊಂಡು ಹೊರಟಿದ್ದರು. ಹೊಲಕ್ಕೆ ಹೋಗಲು ಕೆರೆಯ ಏರಿಯ ಮೇಲೆ ಜಾಗ ಇದ್ದರೂ, ದಾರಿ ಸಮೀಪವಾಗುತ್ತದೆ ಎಂದು ಎಂದಿನಂತೆ ಕೆರೆಯ ಬಯಲಿನಲ್ಲಿ ಗಾಡಿ ಹೊಡೆದುಕೊಂಡು ಹೋಗಿದ್ದಾರೆ. ಈಚೆಗೆ ಬಿದ್ದ ಮಳೆಯಿಂದಾಗಿ, ಹೂಳೆತ್ತಿದ ಗುಂಡಿಗಳು ಕಂಡಿಲ್ಲ. ಗುಂಡಿಯೊಂದರಲ್ಲಿ ಎತ್ತಿನ ಗಾಡಿ ಮಗುಚಿ, ಎಲ್ಲರೂ ಕೆಸರು ನೀರಿನಲ್ಲಿ ಮುಳುಗಿದ್ದಾರೆ. ಎತ್ತುಗಳು ದಡ ಸೇರಿವೆ.