ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮದ ಪುಟ್ಟಸ್ವಾಮಿ (58) ಮತ್ತು ರಾಮೇಗೌಡ (60) ಮೃತಪಟ್ಟವರು. ಮಲ್ಲಾಪುರ ಗ್ರಾಮದಲ್ಲಿ ಮುಸುಕಿನ ಜೋಳವನ್ನು ಒಕ್ಕಣೆ ಮಾಡಿ ಹಿಂತಿರುಗುವ ಸಂದರ್ಭದಲ್ಲಿ ಟ್ರಾಕ್ಟರ್ನ ಚಕ್ರ ಮರದ ತುಂಡಿನ ಮೇಲೆ ಹತ್ತಿದ್ದರಿಂದ ಉರುಳಿದೆ. ಮೇಲೆ ಕುಳಿತಿದ್ದ ಇಬ್ಬರು ಕೆಳಗೆ ಬಿದ್ದಿದ್ದಾರೆ. ಅವರ ಮೇಲೆ ಒಕ್ಕಣೆ ಯಂತ್ರ ಬಿದ್ದ ಕಾರಣ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.