ಸಕಲೇಶಪುರ ತಾಲ್ಲೂಕು ವನಗೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಿದ ಅವರು, ‘ಹಿರಿಯ ಮುತ್ಸದ್ದಿ ಅಡ್ವಾಣಿ ಈಗ ಏನಾಗಿದ್ದಾರೆ. ಅವರನ್ನ ರಾಷ್ಟಪತಿ ಮಾಡಲು ಆಗ್ತಿರಲಿಲ್ಲವೇ?ಒಬ್ಬ ವ್ಯಕ್ತಿ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ.ಮಾನಸಿಕ ವೇದನೆ ನೀಡುವ ಮೂಲಕ ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಿದ ಕೀರ್ತಿ ಮೋದಿಗೆ ಸಲ್ಲುತ್ತದೆ. ಅವರಿಂದಲೇ ಬೆಳೆದ ವ್ಯಕ್ತಿ ಹಿರಿಯರಿಗೆ ನೀಡುತ್ತಿರುವ ಗೌರವ ಅವರ ಸಂಸ್ಕೃತಿಯನ್ನು ತೋರುತ್ತದೆ’ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.