ಮನುಷ್ಯ ಮತ್ತೊಬ್ಬರನ್ನು ಗೆಲ್ಲುವುದಕ್ಕಿಂತ ತನ್ನ ಆತ್ಮನ ವೈರಿಗಳಾದ ಕಷಾಯಗಳ ಹಾಗೂ ಇಂದ್ರೀಯಗಳ ಮೇಲೆ ಜಯ ಸಾಧಿಸುವುದು ಸರ್ವ ಶ್ರೇಷ್ಠ ಎನ್ನುತ್ತಿದ್ದರು. ಸ್ವಾರ್ಥ, ಆಸೆ, ಆಮಿಷಗಳಿಗೆ ಬಲಿಯಾಗಿ ಮನುಷ್ಯನಿಂದಾಗುವ ಅನ್ಯಾಯ, ಅನೀತಿ ತಡೆಯಬೇಕು ಎಂದು ಹೇಳುತ್ತಿದ್ದರು. ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ ಇವುಗಳನ್ನು ರತ್ನತ್ರಯ ಎಂದು ಕರೆದಿದ್ದಾರೆ. ಇವೇ ಮೋಕ್ಷ ಮಾರ್ಗಕ್ಕೆ ಸಾಧನಗಳು ಎಂದರು.