‘ಪ್ರೀತಂ ಜೆ.ಗೌಡ ಶಾಸಕರ ಅನುದಾನದ ಕಾಮಗಾರಿಗಳಿಗೆ ಭಾವಚಿತ್ರಹಾಕಿಸಿಕೊಂಡಿದ್ದಾರೆ’ ಎಂಬ ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ’ನನ್ನ ಅನುದಾನದಲ್ಲಿ ನಡೆದ ಕಾಮಗಾರಿಗಳಿಗೆ ಫೋಟೊ ಹಾಕಿಕೊಂಡರೆ ದೂರು ನೀಡುತ್ತೇವೆ ಎನ್ನುತ್ತಾರೆ. ಆದರೆ, 20 ವರ್ಷಗಳಿಂದ ಇವರು ಮಾಡಿರುವುದು ಏನು? ನನ್ನ ವಿರುದ್ಧ ದೂರು ನೀಡಿದರೆ ಕಾನೂನಾತ್ಮಕವಾಗಿ ಎದುರಿಸುತ್ತೇನೆ. ಪ್ರೀತಂ ಗೌಡರ ಭಾವಚಿತ್ರ ಹಾಸನ ಕ್ಷೇತ್ರದ ಪ್ರತಿ ಮತದಾರರ ಹೃದಯದಲ್ಲಿ ದೆ. ಫೋಟೊ ಹಾಕಿಸಿಕೊಳ್ಳುವ ಅವಶ್ಯಕತೆ ಇಲ್ಲ. ಶಾಸಕರ ಅನುದಾನದಲ್ಲಿ ಕೈಗೊಂಡಕಾಮಗಾರಿಗಳಿಗೆ ಫೋಟೊ ಹಾಕಿಸಿಕೊಳ್ಳುವ ಪದ್ಧತಿಮೊದಲಿನಿಂದಲೂ ಇದೆ, ಅದನ್ನು ಮುಂದುವರೆಸುತ್ತಿದ್ದಾರೆ’ ಎಂದು ಹೇಳಿದರು.