ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ವಿಜಯನಗರ ಬಡಾವಣೆ ನಿವೇಶನ ಹಂಚಿಕೆಯಲ್ಲಿ ಅಕ್ರಮ

ಪ್ರೀತಂ ಗೌಡ ವಿರುದ್ಧ ಆರೋಪ: ಕೋರ್ಟ್‌ ಮೊರೆ ಹೋಗಲು ನಿರ್ಧಾರ–ಸ್ವರೂಪ್
Last Updated 6 ಜನವರಿ 2022, 15:54 IST
ಅಕ್ಷರ ಗಾತ್ರ

ಹಾಸನ: ನಗರದ ವಿಜಯನಗರ ಬಡಾವಣೆಯಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿದ್ದ ಜಾಗವನ್ನು ನಿವೇಶನಗಳಾಗಿ ಪರಿವರ್ತಿಸಿ ಹೊರ ವರ್ತುಲ ರಸ್ತೆ ಸಂತ್ರಸ್ತರಿಗೆ ಪರಿಹಾರವಾಗಿ ನೀಡುವ ನೆಪದಲ್ಲಿ ಸ್ಥಳೀಯಶಾಸಕರ ಬೆಂಬಲಿಗರಿಗೆ ವಾಮಮಾರ್ಗದಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂದುಜೆಡಿಎಸ್‌ ಮುಖಂಡ ಎಚ್.ಪಿ.ಸ್ವರೂಪ್ ಆರೋಪಿಸಿದರು.

ಬಡಾವಣೆಯಲ್ಲಿ ಶಾಲೆ, ಕಾಲೇಜು, ಉದ್ಯಾನ, ಅಂಚೆ ಕಚೇರಿ, ಬ್ಯಾಂಕ್‍ಗಳಿಗೆಂದುಮೀಸಲಿಟ್ಟಿದ್ದ ಸಿಎ ನಿವೇಶನಗಳನ್ನು ಅಕ್ರಮವಾಗಿ ಪರಿವರ್ತಿಸಲಾಗಿದೆ. ಉದ್ದೂರುಗ್ರಾಮದ ವ್ಯಾಪ್ತಿಯಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆಪರಿಹಾರವಾಗಿ ವಿಜಯನಗರ ಬಡಾವಣೆಯಲ್ಲಿ ನಿವೇಶನಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಬದಲಾಗಿ ಸಿಎ ನಿವೇಶನಗಳನ್ನು ಅಕ್ರಮವಾಗಿ ಪರಿವರ್ತಿಸಲಾಗಿದೆ ಎಂದುಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ರೈತರಿಗೆ ಪರಿಹಾರವಾಗಿ ನೀಡಿದಂತೆ ಮಾಡಿ, ಶಾಸಕರ ಬೆಂಬಲಿಗರು, ಹಿಂಬಾಲಕರು ತಮ್ಮ ಹೆಸರಿಗೆ ಕ್ರಯ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸಂತ್ರಸ್ತ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

‘ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ನಿವೇಶನಗಳಿಗೆ ಹುಡಾದಿಂದ ಅಕ್ರಮವಾಗಿ ನಕ್ಷೆತಯಾರಿಸಿ ವಸತಿ ಉದ್ದೇಶದ ನಿವೇಶನ ಸಂಖ್ಯೆ ನೀಡಿ ಸಂತ್ರಸ್ತರ ಹೆಸರಿಗೆಮಂಜೂರು ಮಾಡಲಾಗಿದೆ. ಈ ವೇಳೆ ಅರಣ್ಯ ಇಲಾಖೆ ನಿಯಮಗಳನ್ನೂ ಗಾಳಿಗೆ ತೂರಿಅಲ್ಲಿದ್ದ ನಾಲ್ಕೈದು ಮರಗಳನ್ನು ಕಡಿದು ಸಾಗಿಸಲಾಗಿದೆ.ಈ ಸಂಬಂಧ ಸ್ಥಳೀಯರು ನೀಡಿದ ದೂರು ಆಧರಿಸಿ ಅರಣ್ಯ ಇಲಾಖೆ ತನಿಖೆ ನಡೆಸಿಅಕ್ರಮವಾಗಿ ಮರಗಳನ್ನು ಕಡಿದ ಕಾರಣಕ್ಕಾಗಿ ಹುಡಾಗೆ ₹15 ಸಾವಿರ ದಂಡ ವಿಧಿಸಿದೆ. ಇದರ ವಿರುದ್ಧ ಸ್ಥಳೀಯರ ಜೊತೆ ಸೇರಿ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ದೊಡ್ಡ ಕಟ್ಟಡ ಕಟ್ಟುವುದೇ ಅಭಿವೃದ್ಧಿಯಲ್ಲ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.ಜೆಡಿಎಸ್‌ ನಾಯಕರು ಕಟ್ಟಿದ ಅನೇಕ ಕಟ್ಟಡಗಳಿಂದ ಜಿಲ್ಲೆ ಹಾಗೂ ಹೊರ ಜಿಲ್ಲೆಯಜನರಿಗೆ ಸಾಕಷ್ಟು ಅನುಕೂಲವಾಗಿದೆ. ಏನನ್ನೂ ಮಾಡದ ಶಾಸಕರು, ₹6 ಲಕ್ಷದಿಂದ ₹7ಲಕ್ಷದಲ್ಲಿ ಎರಡು ಫುಡ್‍ಕೋರ್ಟ್ ನಿರ್ಮಾಣ ಮಾಡಿರುವುದೇ ದೊಡ್ಡ ಸಾಧನೆ ಅಂದುಕೊಂಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ವಾಸುದೇವ್, ಪ್ರಶಾಂತ್, ಮಹೇಶ್ ಮತ್ತು ಶಿವಣ್ಣಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT