<p><strong>ಆಲೂರು</strong>: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭರತವಳ್ಳಿ ಸಮೀಪದ ಸಾವಯವ ಪರಿಸರ ಪ್ರಿಯ ಕೃಷಿಕರ ಪುಣ್ಯಭೂಮಿ ಸಂಸ್ಥೆ, ವಿಷವನ್ನು ನುಂಗುತ್ತಿರುವ ಭೂಮಿ ಹಸನು ಮಾಡಿಕೊಂಡು ಸಾವಯವ ಕೃಷಿ ಮಾಡುವ ಮೂಲಕ ಬೇಸಿಗೆ ಕಾಲದಲ್ಲಿ ಗಿಡಗಳು ನಶಿಸದಂತೆ ಅತಿ ಕಡಿಮೆ ವೆಚ್ಚದಲ್ಲಿ ಗಿಡಗಳಿಗೆ ನೀರುಣಿಸುತ್ತ ರೈತರ ಮಾರ್ಗದರ್ಶಿಯಾಗಿದೆ.</p>.<p>1996ರಲ್ಲಿ ಪ್ರಾರಂಭವಾದ ಈ ಸಂಸ್ಥೆ 550 ಸದಸ್ಯ ಬಲ ಹೊಂದಿದೆ. ಸದಸ್ಯರ ಸ್ವಯಂ ಬಲದಿಂದ ಬಲವಾಗಿ ನೆಲೆಯೂರಿದೆ. ಸದಸ್ಯರ ಕೃಷಿಕ ಬೆಳವಣಿಗೆ ಬಗ್ಗೆ ಪರಸ್ಪರ ಚರ್ಚೆ ಮತ್ತು ಅನುಭವ ಹಂಚಿಕೆ ಮಾಡಿಕೊಳ್ಳುವುದು ಸಂಸ್ಥೆಯ ಮೂಲ ಉದ್ದೇಶ. 30 ವರ್ಷಗಳಿಂದ ಈವರೆಗೆ ಸಂಸ್ಥೆ ನೆರವಿನಿಂದ ಹಲವು ಸದಸ್ಯರು, ಕೋಟ್ಯಂತರ ರೂಪಾಯಿ ಮೌಲ್ಯದ ಸಾವಯವ ಕೃಷಿ ಸಂಪತ್ತು ಹೊಂದಿದ್ದು, ಕಡಿಮೆ ಖರ್ಚಿನಲ್ಲಿ ಆಶಾದಾಯಕ ಕೃಷಿ ಮಾಡುತ್ತಿದ್ದಾರೆ.</p>.<p>ಬೇಸಿಗೆ ಕಾಲದಲ್ಲಿ ಈ ಗಿಡಗಳು ಒಣಗದಂತೆ ತೇವಾಂಶದಿಂದ ಕೂಡಿರಲು ಹನಿ ನೀರಾವರಿ ಯೋಜನೆ ಬಳಸುತ್ತಿಲ್ಲ. ಮಾಡಿ ಬಿಸಾಡುವ ಖಾಲಿ ಪ್ಲಾಸ್ಟಿಕ್ ಬಾಟಲ್, ಕ್ಯಾನ್ಗಳಲ್ಲಿ ಸ್ವಲ್ಪ ಮಣ್ಣು ಮಿಶ್ರಣ ಮಾಡಿದ ನೀರು ತುಂಬಿ, ಅಗತ್ಯವಿದ್ದರೆ ಸಗಣಿ ಮಿಶ್ರಣ ಮಾಡಿ, ಬಾಟಲಿಗೆ ಚಿಕ್ಕ ತೂತು ಮಾಡಿ ಗಿಡದ ಬುಡಕ್ಕೆ ಇಟ್ಟಿದ್ದಾರೆ. ನೀರಿನಲ್ಲಿ ಮಣ್ಣು ಮಿಶ್ರಣ ಇರುವುದರಿಂದ ಸುಮಾರು ಒಂದು ಲೀಟರ್ ನೀರು ಒಂದು ವಾರ ಗಿಡದ ಬುಡವನ್ನು ತೇವದಿಂದ ಇಡುತ್ತದೆ.</p>.<p>ಪುಣ್ಯಭೂಮಿಯಲ್ಲಿ ಆಗಾಗ ಸದಸ್ಯರು ಒಗ್ಗೂಡಿ ಸ್ವಯಂಪ್ರೇರಿತರಾಗಿ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಪ್ರತಿ ವರ್ಷ ಕೃಷಿಗೆ ಸಂಬಂಧಿಸಿದ ಜೈವಿಕ ಕೃಷಿ ಸೇರಿದಂತೆ ಹಲವು ಉಪನ್ಯಾಸ ಕಾರ್ಯಕ್ರಮವನ್ನು ನುರಿತ ತಜ್ಞರು, ಕೃಷಿಕರೊಡನೆ ಸಂವಾದ ನಡೆಸುತ್ತಿದ್ದಾರೆ.</p>.<p>ಈ ಸಂದರ್ಭದಲ್ಲಿ ಸಾವಯವ ಕೃಷಿಯಿಂದ ಬೆಳೆದ ವಸ್ತುಗಳನ್ನು ಬಳಸಿ ಆಹಾರ ತಯಾರಿಸಲಾಗುತ್ತದೆ. ಆಹಾರ ತಯಾರಿಕೆಗೆ ಈವರೆಗೂ ಗ್ಯಾಸ್ ಬಳಕೆ ಮಾಡಿಲ್ಲ. ಶೃಂಗೇರಿ ಒಲೆ ನಿರ್ಮಾಣ ಮಾಡಿಕೊಂಡು ಸ್ಥಳದಲ್ಲಿ ದೊರಕುವ ಅತಿ ಕಡಿಮೆ ಸೌದೆ ಬಳಸಿಕೊಂಡು ಅಡುಗೆ ಮಾಡುತ್ತಿದ್ದಾರೆ.</p>.<p>ಪ್ರತಿ ಮನೆಯಲ್ಲಿ ಗ್ಯಾಸ್ ಬಳಕೆಗೆ ಮಾರು ಹೋಗಿರುವ ಈ ಕಾಲದಲ್ಲಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಈ ಸಂಸ್ಥೆಗೆ ತಟ್ಟುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಹಾಸನದಿಂದ 10 ಕಿ.ಮೀ. ಆಲೂರಿನಿಂದ 3 ಕೀ.ಮೀ. ದೂರದಲ್ಲಿ ಈ ಸಂಸ್ಥೆ ಇದೆ.</p>.<div><blockquote>ಇದು ರೈತರನ್ನೊಳಗೊಂಡ ಸಂಸ್ಥೆ. ಬಿಸಿಲ ಬೇಗೆಯಲ್ಲಿ ಗಿಡ ಉಳಿಸಿಕೊಳ್ಳಲು ನೂರಾರು ಪುಟ್ಟ ಗಿಡಗಳಿಗೆ ಬಾಟಲಿ ಮೂಲಕ ಹನಿ ನೀರಾವರಿ ಮಾಡಿದ್ದೇವೆ </blockquote><span class="attribution">ವಿಜಯ್ ಅಂಗಡಿ,ಪುಣ್ಯಭೂಮಿ ಸಂಸ್ಥೆ ಅಧ್ಯಕ್ಷ</span></div>.<p><strong>ಅಪರೂಪದ ಸಸ್ಯ ಸಂಪತ್ತು</strong></p><p>ಕೇವಲ ಒಂದೂವರೆ ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಕಡಿಮೆ ಖರ್ಚಿನಲ್ಲಿ ಸುಮಾರು 500 ಜಾತಿ ಹಣ್ಣು, ಗೆಡ್ಡೆ, ಗೆಣಸು, ಔಷಧ ಗಿಡಗಳನ್ನು ಹೊಂದಿದೆ.</p><p>ವಿಶೇಷವೆಂದರೆ ಆರೋರೂಟ್ (ನಿಶ್ಯಕ್ತಿ ಇರುವ ಮಕ್ಕಳಿಗೆ ಬಳಸುವ ಆರೋರೂಟ್ ಪೌಡರ್), ಔಷಧಿ ಗುಣ ಹೊಂದಿರುವ ಕಸ್ತೂರಿ ಅರಿಶಿಣ ಅತ್ಯಂತ ದುಬಾರಿ ಬೆಲೆಯುಳ್ಳ ನಸ್ಯ. ರುದ್ರಾಕ್ಷಿ ಹಲಸು (ಹಿಂದೆ ರಾಜರು ಇಷ್ಟದಿಂದ ಉಪಯೋಗಿಸುತ್ತಿದ್ದ ಸುವಾಸನೆಭರಿತ ಹಣ್ಣು), ನಾಟಿ ತೊಂಡೆ, ಎಲೆ ಬೆಳ್ಳುಳ್ಳಿ, ಅಮೃತಬಳ್ಳಿ, ಚಕ್ರಮುನಿ (ಅಪರೂಪದ ಸಸ್ಯ), ಬಳ್ಳಿ ಅಲೂಗಡ್ಡೆ, ಬಳ್ಳಿ ಗೆಣಸು, ಹುತ್ತರಿ ಗೆಣಸು, ಮರಗೆಣಸು, ಸುವರ್ಣಗಡ್ಡೆ, ಸುಗಂಧ ದ್ರವ್ಯ ಹೊಂದಿರುವ ರಾಶಣಗಡ್ಡೆ, ನಿಂಬೆಹುಲ್ಲು, ನಾಟಿ ಅನಾನಸ್ (ಬರದ ಕಾಲದಲ್ಲೂ ಬೆಳೆಯುವ ಹಣ್ಣನ ಗಿಡ) ಕಾಫಿ, ಮೆಣಸು, ಏಲಕ್ಕಿ ಸೇರಿದಂತೆ ಜನರ ಬದುಕಿಗೆ ಬೇಕಾದ ಅವಶ್ಯಕ ಕೃಷಿ ಸಂಕುಲಗಳನ್ನು ಬೆಳೆಯಲಾಗಿದೆ.</p><p>ಬ್ರಯೋಫೈಲಮ್ (ಕಿಡ್ನಿಯಲ್ಲಿ ಕಲ್ಲು ಕರಗಿಸುವ ಸಸ್ಯ), ಪೆಪ್ಪರಮಿಂಟ್ (ಹೊಟ್ಟೆಗೆ ಸಂಬಂಧಿಸಿದ ಬೇಧಿ, ವಾಂತಿ, ಹೊಟ್ಟೆ ತೊಳಸುವ ಕಾಯಿಲೆಗೆ ರಾಮಬಾಣ), ಜಮ್ಮ ನೇರಲೆಹಣ್ಣು, ಸೋಂಪುಗಿಡ, ಚರ್ಮರೋಗಕ್ಕೆ ಸ್ನೇಕ್ಪ್ಲಾಂಟ್, ಲೋಳಿಸರ ಸೇರಿದಂತೆ ಅನೇಕ ಸಸ್ಯ ಸಂಕುಲಗಳಿವೆ. ಈ ಸಸ್ಯಗಳು ಬಹುಬೇಗ ನಾಶವಾಗುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲೂರು</strong>: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭರತವಳ್ಳಿ ಸಮೀಪದ ಸಾವಯವ ಪರಿಸರ ಪ್ರಿಯ ಕೃಷಿಕರ ಪುಣ್ಯಭೂಮಿ ಸಂಸ್ಥೆ, ವಿಷವನ್ನು ನುಂಗುತ್ತಿರುವ ಭೂಮಿ ಹಸನು ಮಾಡಿಕೊಂಡು ಸಾವಯವ ಕೃಷಿ ಮಾಡುವ ಮೂಲಕ ಬೇಸಿಗೆ ಕಾಲದಲ್ಲಿ ಗಿಡಗಳು ನಶಿಸದಂತೆ ಅತಿ ಕಡಿಮೆ ವೆಚ್ಚದಲ್ಲಿ ಗಿಡಗಳಿಗೆ ನೀರುಣಿಸುತ್ತ ರೈತರ ಮಾರ್ಗದರ್ಶಿಯಾಗಿದೆ.</p>.<p>1996ರಲ್ಲಿ ಪ್ರಾರಂಭವಾದ ಈ ಸಂಸ್ಥೆ 550 ಸದಸ್ಯ ಬಲ ಹೊಂದಿದೆ. ಸದಸ್ಯರ ಸ್ವಯಂ ಬಲದಿಂದ ಬಲವಾಗಿ ನೆಲೆಯೂರಿದೆ. ಸದಸ್ಯರ ಕೃಷಿಕ ಬೆಳವಣಿಗೆ ಬಗ್ಗೆ ಪರಸ್ಪರ ಚರ್ಚೆ ಮತ್ತು ಅನುಭವ ಹಂಚಿಕೆ ಮಾಡಿಕೊಳ್ಳುವುದು ಸಂಸ್ಥೆಯ ಮೂಲ ಉದ್ದೇಶ. 30 ವರ್ಷಗಳಿಂದ ಈವರೆಗೆ ಸಂಸ್ಥೆ ನೆರವಿನಿಂದ ಹಲವು ಸದಸ್ಯರು, ಕೋಟ್ಯಂತರ ರೂಪಾಯಿ ಮೌಲ್ಯದ ಸಾವಯವ ಕೃಷಿ ಸಂಪತ್ತು ಹೊಂದಿದ್ದು, ಕಡಿಮೆ ಖರ್ಚಿನಲ್ಲಿ ಆಶಾದಾಯಕ ಕೃಷಿ ಮಾಡುತ್ತಿದ್ದಾರೆ.</p>.<p>ಬೇಸಿಗೆ ಕಾಲದಲ್ಲಿ ಈ ಗಿಡಗಳು ಒಣಗದಂತೆ ತೇವಾಂಶದಿಂದ ಕೂಡಿರಲು ಹನಿ ನೀರಾವರಿ ಯೋಜನೆ ಬಳಸುತ್ತಿಲ್ಲ. ಮಾಡಿ ಬಿಸಾಡುವ ಖಾಲಿ ಪ್ಲಾಸ್ಟಿಕ್ ಬಾಟಲ್, ಕ್ಯಾನ್ಗಳಲ್ಲಿ ಸ್ವಲ್ಪ ಮಣ್ಣು ಮಿಶ್ರಣ ಮಾಡಿದ ನೀರು ತುಂಬಿ, ಅಗತ್ಯವಿದ್ದರೆ ಸಗಣಿ ಮಿಶ್ರಣ ಮಾಡಿ, ಬಾಟಲಿಗೆ ಚಿಕ್ಕ ತೂತು ಮಾಡಿ ಗಿಡದ ಬುಡಕ್ಕೆ ಇಟ್ಟಿದ್ದಾರೆ. ನೀರಿನಲ್ಲಿ ಮಣ್ಣು ಮಿಶ್ರಣ ಇರುವುದರಿಂದ ಸುಮಾರು ಒಂದು ಲೀಟರ್ ನೀರು ಒಂದು ವಾರ ಗಿಡದ ಬುಡವನ್ನು ತೇವದಿಂದ ಇಡುತ್ತದೆ.</p>.<p>ಪುಣ್ಯಭೂಮಿಯಲ್ಲಿ ಆಗಾಗ ಸದಸ್ಯರು ಒಗ್ಗೂಡಿ ಸ್ವಯಂಪ್ರೇರಿತರಾಗಿ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಪ್ರತಿ ವರ್ಷ ಕೃಷಿಗೆ ಸಂಬಂಧಿಸಿದ ಜೈವಿಕ ಕೃಷಿ ಸೇರಿದಂತೆ ಹಲವು ಉಪನ್ಯಾಸ ಕಾರ್ಯಕ್ರಮವನ್ನು ನುರಿತ ತಜ್ಞರು, ಕೃಷಿಕರೊಡನೆ ಸಂವಾದ ನಡೆಸುತ್ತಿದ್ದಾರೆ.</p>.<p>ಈ ಸಂದರ್ಭದಲ್ಲಿ ಸಾವಯವ ಕೃಷಿಯಿಂದ ಬೆಳೆದ ವಸ್ತುಗಳನ್ನು ಬಳಸಿ ಆಹಾರ ತಯಾರಿಸಲಾಗುತ್ತದೆ. ಆಹಾರ ತಯಾರಿಕೆಗೆ ಈವರೆಗೂ ಗ್ಯಾಸ್ ಬಳಕೆ ಮಾಡಿಲ್ಲ. ಶೃಂಗೇರಿ ಒಲೆ ನಿರ್ಮಾಣ ಮಾಡಿಕೊಂಡು ಸ್ಥಳದಲ್ಲಿ ದೊರಕುವ ಅತಿ ಕಡಿಮೆ ಸೌದೆ ಬಳಸಿಕೊಂಡು ಅಡುಗೆ ಮಾಡುತ್ತಿದ್ದಾರೆ.</p>.<p>ಪ್ರತಿ ಮನೆಯಲ್ಲಿ ಗ್ಯಾಸ್ ಬಳಕೆಗೆ ಮಾರು ಹೋಗಿರುವ ಈ ಕಾಲದಲ್ಲಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಈ ಸಂಸ್ಥೆಗೆ ತಟ್ಟುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಹಾಸನದಿಂದ 10 ಕಿ.ಮೀ. ಆಲೂರಿನಿಂದ 3 ಕೀ.ಮೀ. ದೂರದಲ್ಲಿ ಈ ಸಂಸ್ಥೆ ಇದೆ.</p>.<div><blockquote>ಇದು ರೈತರನ್ನೊಳಗೊಂಡ ಸಂಸ್ಥೆ. ಬಿಸಿಲ ಬೇಗೆಯಲ್ಲಿ ಗಿಡ ಉಳಿಸಿಕೊಳ್ಳಲು ನೂರಾರು ಪುಟ್ಟ ಗಿಡಗಳಿಗೆ ಬಾಟಲಿ ಮೂಲಕ ಹನಿ ನೀರಾವರಿ ಮಾಡಿದ್ದೇವೆ </blockquote><span class="attribution">ವಿಜಯ್ ಅಂಗಡಿ,ಪುಣ್ಯಭೂಮಿ ಸಂಸ್ಥೆ ಅಧ್ಯಕ್ಷ</span></div>.<p><strong>ಅಪರೂಪದ ಸಸ್ಯ ಸಂಪತ್ತು</strong></p><p>ಕೇವಲ ಒಂದೂವರೆ ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಕಡಿಮೆ ಖರ್ಚಿನಲ್ಲಿ ಸುಮಾರು 500 ಜಾತಿ ಹಣ್ಣು, ಗೆಡ್ಡೆ, ಗೆಣಸು, ಔಷಧ ಗಿಡಗಳನ್ನು ಹೊಂದಿದೆ.</p><p>ವಿಶೇಷವೆಂದರೆ ಆರೋರೂಟ್ (ನಿಶ್ಯಕ್ತಿ ಇರುವ ಮಕ್ಕಳಿಗೆ ಬಳಸುವ ಆರೋರೂಟ್ ಪೌಡರ್), ಔಷಧಿ ಗುಣ ಹೊಂದಿರುವ ಕಸ್ತೂರಿ ಅರಿಶಿಣ ಅತ್ಯಂತ ದುಬಾರಿ ಬೆಲೆಯುಳ್ಳ ನಸ್ಯ. ರುದ್ರಾಕ್ಷಿ ಹಲಸು (ಹಿಂದೆ ರಾಜರು ಇಷ್ಟದಿಂದ ಉಪಯೋಗಿಸುತ್ತಿದ್ದ ಸುವಾಸನೆಭರಿತ ಹಣ್ಣು), ನಾಟಿ ತೊಂಡೆ, ಎಲೆ ಬೆಳ್ಳುಳ್ಳಿ, ಅಮೃತಬಳ್ಳಿ, ಚಕ್ರಮುನಿ (ಅಪರೂಪದ ಸಸ್ಯ), ಬಳ್ಳಿ ಅಲೂಗಡ್ಡೆ, ಬಳ್ಳಿ ಗೆಣಸು, ಹುತ್ತರಿ ಗೆಣಸು, ಮರಗೆಣಸು, ಸುವರ್ಣಗಡ್ಡೆ, ಸುಗಂಧ ದ್ರವ್ಯ ಹೊಂದಿರುವ ರಾಶಣಗಡ್ಡೆ, ನಿಂಬೆಹುಲ್ಲು, ನಾಟಿ ಅನಾನಸ್ (ಬರದ ಕಾಲದಲ್ಲೂ ಬೆಳೆಯುವ ಹಣ್ಣನ ಗಿಡ) ಕಾಫಿ, ಮೆಣಸು, ಏಲಕ್ಕಿ ಸೇರಿದಂತೆ ಜನರ ಬದುಕಿಗೆ ಬೇಕಾದ ಅವಶ್ಯಕ ಕೃಷಿ ಸಂಕುಲಗಳನ್ನು ಬೆಳೆಯಲಾಗಿದೆ.</p><p>ಬ್ರಯೋಫೈಲಮ್ (ಕಿಡ್ನಿಯಲ್ಲಿ ಕಲ್ಲು ಕರಗಿಸುವ ಸಸ್ಯ), ಪೆಪ್ಪರಮಿಂಟ್ (ಹೊಟ್ಟೆಗೆ ಸಂಬಂಧಿಸಿದ ಬೇಧಿ, ವಾಂತಿ, ಹೊಟ್ಟೆ ತೊಳಸುವ ಕಾಯಿಲೆಗೆ ರಾಮಬಾಣ), ಜಮ್ಮ ನೇರಲೆಹಣ್ಣು, ಸೋಂಪುಗಿಡ, ಚರ್ಮರೋಗಕ್ಕೆ ಸ್ನೇಕ್ಪ್ಲಾಂಟ್, ಲೋಳಿಸರ ಸೇರಿದಂತೆ ಅನೇಕ ಸಸ್ಯ ಸಂಕುಲಗಳಿವೆ. ಈ ಸಸ್ಯಗಳು ಬಹುಬೇಗ ನಾಶವಾಗುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>