<p>ಹಳೇಬೀಡು: ಕಲ್ಲಳ್ಳಿ ಅರಣ್ಯ ಪ್ರದೇಶದ ಕಾಡಂಚಿನಲ್ಲಿರುವ ಅಮ್ಮನಬ್ಯಾಡರಹಳ್ಳಿಯಲ್ಲಿ ಕೊಲ್ಲಾಪುರದಮ್ಮ, ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಶನಿವಾರ ವೈಭವದಿಂದ ನೆರವೇರಿತು.</p>.<p>ಕೊಲ್ಲಾಪುರದಮ್ಮ, ಚಾಮುಂಡೇ ಶ್ವರಿ ಹಾಗೂ ಕೆಂಚರಾಯ ಸ್ವಾಮಿಯ ಗಣ ಮಕ್ಕಳು ವಾದ್ಯಗಳ ಲಯಕ್ಕೆ ತಕ್ಕಂತೆ ಕುಣಿದರು. ನೆರೆದಿದ್ದ ಭಕ್ತರು ಶಿಳ್ಳೆ ಹಾಕಿ, ಜಯ ಘೋಷ ಹಾಕುತ್ತ ಕುಣಿಯುತ್ತಿದ್ದ ಗಣ ಮಕ್ಕಳನ್ನು ಹುರಿದುಂಬಿಸಿದರು.</p>.<p>ವಿವಿಧ ಪೂಜಾ ವಿಧಾನ ನೆರವೇರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಭಕ್ತರು ನೂಕುನುಗ್ಗಲಿನಲ್ಲಿ ರಥ ಎಳೆದರು. ಕೊಲ್ಲಾಪುರದಮ್ಮನವರಿಗೆ ಜೈ, ಚಾಮುಂಡೇಶ್ವರಿ ಅಮ್ಮನವರಿಗೆ ಜೈ, ಕೆಂಚರಾಯ ಸ್ವಾಮಿಗೆ ಜೈ ಎಂದು ಘೋಷಣೆ ಕೂಗಿದ ಜನರು ಭಕ್ತಿ ಲೋಕದಲ್ಲಿ ಮಿಂದೆದ್ದರು.</p>.<p>ದೇವಾಲಯದ ಸುತ್ತ ಚಲಿಸಿದ ರಥ ಸ್ವಸ್ಥಾನಕ್ಕೆ ಬಂದಾಗ ಜಮಾಯಿಸಿದ ಭಕ್ತರು ರಥದಲ್ಲಿ ಆರೋಹಣ ಮಾಡಿದ ದೇವತೆಗಳ ದರ್ಶನ ಪಡೆದರು. ವಿವಿಧ ಊರಿನಿಂದ ಆಗಮಿಸಿದ್ದ ಭಕ್ತರು ಹಣ್ಣು ಕಾಯಿ ಪೂಜೆ ಮಾಡಿಸಿದರು.</p>.<p>ಗ್ರಾಮದಲ್ಲಿ ಮೂರು ದಿನದಿಂದ ಜಾತ್ರೆ ನಡೆಯಿತು. 26ರಂದು ಮಳೆ, ಬೆಳೆ ಸಮರ್ಪಕವಾಗಿ ಬರಲಿ, ಜನರು ಸಂತೃಪ್ತಿಯಿಂದ ಬದುಕುವಂತಾಗಬೇಕು ಎಂದು ಪ್ರಾರ್ಥಿಸಿ ಸತ್ಯಮಲ್ಲೇಶ್ವರ ಸ್ವಾಮಿಯವರ ಪರ ನೆರವೇರಿಸಿ, ಜಾತ್ರೆ ಆರಂಭಿಸಲಾಯಿತು. ಅಂದು ರಥ ಶುದ್ಧೀಕರಿಸಿ ಅಭಿಷೇಕ ಪೂಜೆ ನೆರವೇರಿಸಲಾಯಿತು.</p>.<p>27ರಂದು ಶುಕ್ರವಾರ ರಥಕ್ಕೆ ಕಳಸ ಸ್ಥಾಪನೆ ನೆರವೇರಿಸಲಾಯಿತು. ನಂತರ ಘಳಿಗೆ ತೇರು ನಡೆಯಿತು. ಸುಮಂಗಲೆಯರು ಹಾಗೂ ಪುಟ್ಟ ಹೆಣ್ಣು ಮಕ್ಕಳು ಗುಗ್ಗಳಾರತಿ ನಡೆಸಿದರು. ವಿದ್ಯುತ್ ದೀಪಗಳ ಬೆಳಕಿನಲ್ಲಿ ಅಮ್ಮನವರ ಸಿಡಿ ಹಾಡಿಸಲಾಯಿತು.</p>.<p>ಮೂರು ದಿನದಿಂದ ಜಾತ್ರೆ ಸಂಭ್ರಮಿಸಿದ ಗ್ರಾಮಸ್ಥರು ಭಾನುವಾರ ಕೆಂಚರಾಯನ ಭಾನಕ್ಕೆ ಸಿದ್ಧತೆ ನಡೆಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-36-1654647048</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಳೇಬೀಡು: ಕಲ್ಲಳ್ಳಿ ಅರಣ್ಯ ಪ್ರದೇಶದ ಕಾಡಂಚಿನಲ್ಲಿರುವ ಅಮ್ಮನಬ್ಯಾಡರಹಳ್ಳಿಯಲ್ಲಿ ಕೊಲ್ಲಾಪುರದಮ್ಮ, ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಶನಿವಾರ ವೈಭವದಿಂದ ನೆರವೇರಿತು.</p>.<p>ಕೊಲ್ಲಾಪುರದಮ್ಮ, ಚಾಮುಂಡೇ ಶ್ವರಿ ಹಾಗೂ ಕೆಂಚರಾಯ ಸ್ವಾಮಿಯ ಗಣ ಮಕ್ಕಳು ವಾದ್ಯಗಳ ಲಯಕ್ಕೆ ತಕ್ಕಂತೆ ಕುಣಿದರು. ನೆರೆದಿದ್ದ ಭಕ್ತರು ಶಿಳ್ಳೆ ಹಾಕಿ, ಜಯ ಘೋಷ ಹಾಕುತ್ತ ಕುಣಿಯುತ್ತಿದ್ದ ಗಣ ಮಕ್ಕಳನ್ನು ಹುರಿದುಂಬಿಸಿದರು.</p>.<p>ವಿವಿಧ ಪೂಜಾ ವಿಧಾನ ನೆರವೇರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಭಕ್ತರು ನೂಕುನುಗ್ಗಲಿನಲ್ಲಿ ರಥ ಎಳೆದರು. ಕೊಲ್ಲಾಪುರದಮ್ಮನವರಿಗೆ ಜೈ, ಚಾಮುಂಡೇಶ್ವರಿ ಅಮ್ಮನವರಿಗೆ ಜೈ, ಕೆಂಚರಾಯ ಸ್ವಾಮಿಗೆ ಜೈ ಎಂದು ಘೋಷಣೆ ಕೂಗಿದ ಜನರು ಭಕ್ತಿ ಲೋಕದಲ್ಲಿ ಮಿಂದೆದ್ದರು.</p>.<p>ದೇವಾಲಯದ ಸುತ್ತ ಚಲಿಸಿದ ರಥ ಸ್ವಸ್ಥಾನಕ್ಕೆ ಬಂದಾಗ ಜಮಾಯಿಸಿದ ಭಕ್ತರು ರಥದಲ್ಲಿ ಆರೋಹಣ ಮಾಡಿದ ದೇವತೆಗಳ ದರ್ಶನ ಪಡೆದರು. ವಿವಿಧ ಊರಿನಿಂದ ಆಗಮಿಸಿದ್ದ ಭಕ್ತರು ಹಣ್ಣು ಕಾಯಿ ಪೂಜೆ ಮಾಡಿಸಿದರು.</p>.<p>ಗ್ರಾಮದಲ್ಲಿ ಮೂರು ದಿನದಿಂದ ಜಾತ್ರೆ ನಡೆಯಿತು. 26ರಂದು ಮಳೆ, ಬೆಳೆ ಸಮರ್ಪಕವಾಗಿ ಬರಲಿ, ಜನರು ಸಂತೃಪ್ತಿಯಿಂದ ಬದುಕುವಂತಾಗಬೇಕು ಎಂದು ಪ್ರಾರ್ಥಿಸಿ ಸತ್ಯಮಲ್ಲೇಶ್ವರ ಸ್ವಾಮಿಯವರ ಪರ ನೆರವೇರಿಸಿ, ಜಾತ್ರೆ ಆರಂಭಿಸಲಾಯಿತು. ಅಂದು ರಥ ಶುದ್ಧೀಕರಿಸಿ ಅಭಿಷೇಕ ಪೂಜೆ ನೆರವೇರಿಸಲಾಯಿತು.</p>.<p>27ರಂದು ಶುಕ್ರವಾರ ರಥಕ್ಕೆ ಕಳಸ ಸ್ಥಾಪನೆ ನೆರವೇರಿಸಲಾಯಿತು. ನಂತರ ಘಳಿಗೆ ತೇರು ನಡೆಯಿತು. ಸುಮಂಗಲೆಯರು ಹಾಗೂ ಪುಟ್ಟ ಹೆಣ್ಣು ಮಕ್ಕಳು ಗುಗ್ಗಳಾರತಿ ನಡೆಸಿದರು. ವಿದ್ಯುತ್ ದೀಪಗಳ ಬೆಳಕಿನಲ್ಲಿ ಅಮ್ಮನವರ ಸಿಡಿ ಹಾಡಿಸಲಾಯಿತು.</p>.<p>ಮೂರು ದಿನದಿಂದ ಜಾತ್ರೆ ಸಂಭ್ರಮಿಸಿದ ಗ್ರಾಮಸ್ಥರು ಭಾನುವಾರ ಕೆಂಚರಾಯನ ಭಾನಕ್ಕೆ ಸಿದ್ಧತೆ ನಡೆಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-36-1654647048</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>