ಸ್ನೇಹಿತರೊಂದಿಗೆ ಗಣೇಶ ವಿಸರ್ಜನೆಗೆ ತೆರಳುತ್ತಿರುವುದಾಗಿ ಹೇಳಿ ತಾಯಿ ಮೊಬೈಲ್ ಪಡೆದು ಸತ್ಯಮಂಗಲ ಕೆರೆ ಬಳಿ ಅಮಿತ್ ಹೋಗಿ ತಂದೆಗೆ ಕರೆ ಮಾಡಿದ್ದಾನೆ. ಕೆರೆ ದಡದಲ್ಲಿ ಬಾಲಕನ ಚಪ್ಪಲಿ ಪತ್ತೆ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯಿಂದ ಮಂಗಳವಾರ ತಡರಾತ್ರಿವರೆಗೂ ಪೋಷಕರು, ಸಂಬಂಧಿಗಳು ಹುಟುಕಾಟ ನಡೆಸಿದರು. ಅದಾದ ಬಳಿಕ ಬುಧವಾರ ಅಗ್ನಿಶಾಮಕ ಸಿಬ್ಬಂದಿ ಬೋಟ್ ಮೂಲಕ ಶೋಧ ಕಾರ್ಯ ನಡೆಸಿದರು. ಗುರುವಾರ ಸಂಜೆ ಬಾಲಕ ಶವ ಪತ್ತೆಯಾಯಿತು. ಮೃತದೇಹ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.