‘ಸುತ್ತಮುತ್ತಲ ಗ್ರಾಮದೊಳಗೆ ಕಲ್ಲಿನ ಚೂರುಗಳು ಬೀಳುತ್ತಿವೆ. ಅಕ್ರಮ ಗಣಿಗಾರಿಕೆಗೆ ಜಾವಗಲ್, ಬಾಣಾವರ ಹಾಗೂ ಹಳೇಬೀಡು ಪೊಲೀಸರು ಕುಮ್ಮಕ್ಕು ನೀಡುತ್ತಿದ್ದಾರೆ. ಗಣಿಗಾರಿಕೆ ಮಾಡುತ್ತಿರುವ ಬಿ.ಪಿ.ಸುರೇಶ್, ಜ್ಞಾನಮೂರ್ತಿ, ಕಾಳಿಯಪ್ಪ, ರವಿ, ನಸ್ರುಲ್ಲ, ವಿಶ್ವನಾಥ್, ಸಿದ್ದೇಶ್ ಅವರು ರೌಡಿ ಶೀಟರ್ಗಳು. 2013–14ರಲ್ಲೂ ಅಂದಿನ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿತ್ತು. ಆಗ ಎರಡು ತಿಂಗಳು ನಿಲ್ಲಿಸಲಾಗಿತ್ತು. ಈಗ ಬೃಹತ್ ಮಟ್ಟದಲ್ಲಿ ನಡೆಯುತ್ತಿದೆ’ ಎಂದು ದೂರಿದರು.