<p><strong>ಅರಸೀಕೆರೆ</strong>: ನಗರದ ಹೃದಯಭಾಗದಲ್ಲಿ ಸುಮಾರು ₹30 ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು, ಇದೀಗ ತಾತ್ಕಾಲಿಕ ಬಸ್ ನಿಲ್ದಾಣಗಳಲ್ಲಿ ಸೌಕರ್ಯಗಳಿಲ್ಲದೇ ಪ್ರಯಾಣಿಕರು ಶಪಿಸುವಂತಾಗಿದೆ.</p>.<p>ರೈಲ್ವೆ ಜಂಕ್ಷನ್ ಹಾಗೂ ದೊಡ್ಡ ನಗರವಾದ ಅರಸೀಕೆರೆಯಲ್ಲಿ ನಿತ್ಯ ಸಹಸ್ರಾರು ಪ್ರಯಾಣಿಕರು ವಿವಿಧ ಭಾಗಗಳಿಗೆ ಸಂಚರಿಸುತ್ತಾರೆ. ಸೂಕ್ತವಾದ ಮೇಲ್ಚಾವಣಿ ಇಲ್ಲದ್ದರಿಂದ ಸುಡು ಬಿಸಿಲಿನಲ್ಲಿ ರಸ್ತೆ ಬದಿಯಲ್ಲಿ ಜನರು ನಿಲ್ಲಬೇಕಿದೆ. ಕುಳಿತುಕೊಳ್ಳಲು ಆಸನ, ಶುದ್ದ ಕುಡಿಯುವ ನೀರು, ಶೌಚಲಯದ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ತಾತ್ಕಾಲಿಕ ಬಸ್ ನಿಲ್ದಾಣ ಹಾಗೂ ಈಗಿರುವ ಬಸ್ ನಿಲ್ದಾಣದ ಎದುರಿನ ಸ್ಥಳಗಳಲ್ಲಿ ಬಸ್ಗಳ ನಿಲುಗಡೆ ನೀಡಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ. ಬಸ್ಗಳ ವೇಳಾಪಟ್ಟಿ ಅಥವಾ ಮಾರ್ಗದ ಮಾಹಿತಿ ಫಲಕಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲದೇ ಇರುವುದರಿಂದ ವೃದ್ದರು ಹಾಗೂ ಹಿರಿಯ ನಾಗರಿಕರು ಗೊಂದಲಕ್ಕೆ ಸಿಲುಕಿದ್ದಾರೆ.</p>.<p>ಸಪ್ನಾ ಸ್ವೀಟ್ ಬಳಿ ಹಾಗೂ ಎದುರುಗಡೆಯ ನಗರಸಭೆ ವಾಣಿಜ್ಯ ಸಂಕಿರ್ಣದ ಬಳಿ ಬಸ್ ಹತ್ತಲು ಇಳಿಯಲು ಸ್ವಲ್ಪ ಸಮಯಾವಕಾಶ ನೀಡಬೇಕು. ನಿರ್ವಾಹಕರು ಹಾಗೂ ಚಾಲಕರು ಅವಸರ ಮಾಡಬಾರದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಮೂಲ ಸೌಕರ್ಯ ಕಲ್ಪಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯ.</p>.<p>ಈಗಾಗಲೇ ಬಸ್ ಡಿಪೋ ಬಳಿ ಗುರುತಿಸಲಾಗಿರುವ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಬಸ್ಗಳು ಬಂದು ಹೋಗಲು ಪ್ರಾರಂಭಿಸಿದ್ದು, ಇಲ್ಲಿಯೂ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಡಾಂಬರೀಕರಣ ಅಥವಾ ಕಾಂಕ್ರೀಟ್ ಹಾಕಿಸಿ ದೂಳಿನಿಂದ ಮುಕ್ತಿ ನೀಡಬೇಕು ಎನ್ನುತ್ತಾರೆ ಜನರು.</p>.<p>ನೂತನ ಬಸ್ ನಿಲ್ದಾಣ ಕಾಮಗಾರಿಗೆ ಕನಿಷ್ಠ 2 ವರ್ಷಗಳಾದರೂ ಸಮಯ ಬೇಕು. ತಾತ್ಕಾಲಿಕ ನಿಲ್ದಾಣಗಳಲ್ಲಿ ಮೂಲಸೌಕರ್ಯ ಒದಗಿಸಿದ ನಂತರ ಬಸ್ ನಿಲ್ದಾಣ ಕಾಮಗಾರಿ ಕೈಗೊಳ್ಳಬೇಕಾಗಿತ್ತು ಎಂಬುದು ಪ್ರಯಾಣಿಕರು ಹೇಳುವ ಮಾತು.</p>.<div><blockquote>ಶೀಟ್ ಬಳಸಿ ಎರಡೂ ಕಡೆ ಮೇಲ್ಚಾವಣಿ ಮಾಡಲಾಗುವುದು. ಮತ್ತೆರೆಡು ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಗಮನ ಹರಿಸಲಾಗುವುದು. </blockquote><span class="attribution">– ಕೃಷ್ಣಪ್ಪ, ಡಿಪೋ ವ್ಯವಸ್ಥಾಪಕ</span></div>.<div><blockquote>ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು, ಕೆಲವು ದಿನ ಕಿರಿಕಿರಿಯಾಗುತ್ತದೆ. ಮೂಲಸೌಕರ್ಯಗಳ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, 2 ದಿನಗಳಲ್ಲಿ ಸರಿಪಡಿಸಲಾಗುತ್ತದೆ. </blockquote><span class="attribution">– ಕೆ.ಎಂ. ಶಿವಲಿಂಗೇಗೌಡ, ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ</strong>: ನಗರದ ಹೃದಯಭಾಗದಲ್ಲಿ ಸುಮಾರು ₹30 ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು, ಇದೀಗ ತಾತ್ಕಾಲಿಕ ಬಸ್ ನಿಲ್ದಾಣಗಳಲ್ಲಿ ಸೌಕರ್ಯಗಳಿಲ್ಲದೇ ಪ್ರಯಾಣಿಕರು ಶಪಿಸುವಂತಾಗಿದೆ.</p>.<p>ರೈಲ್ವೆ ಜಂಕ್ಷನ್ ಹಾಗೂ ದೊಡ್ಡ ನಗರವಾದ ಅರಸೀಕೆರೆಯಲ್ಲಿ ನಿತ್ಯ ಸಹಸ್ರಾರು ಪ್ರಯಾಣಿಕರು ವಿವಿಧ ಭಾಗಗಳಿಗೆ ಸಂಚರಿಸುತ್ತಾರೆ. ಸೂಕ್ತವಾದ ಮೇಲ್ಚಾವಣಿ ಇಲ್ಲದ್ದರಿಂದ ಸುಡು ಬಿಸಿಲಿನಲ್ಲಿ ರಸ್ತೆ ಬದಿಯಲ್ಲಿ ಜನರು ನಿಲ್ಲಬೇಕಿದೆ. ಕುಳಿತುಕೊಳ್ಳಲು ಆಸನ, ಶುದ್ದ ಕುಡಿಯುವ ನೀರು, ಶೌಚಲಯದ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ತಾತ್ಕಾಲಿಕ ಬಸ್ ನಿಲ್ದಾಣ ಹಾಗೂ ಈಗಿರುವ ಬಸ್ ನಿಲ್ದಾಣದ ಎದುರಿನ ಸ್ಥಳಗಳಲ್ಲಿ ಬಸ್ಗಳ ನಿಲುಗಡೆ ನೀಡಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ. ಬಸ್ಗಳ ವೇಳಾಪಟ್ಟಿ ಅಥವಾ ಮಾರ್ಗದ ಮಾಹಿತಿ ಫಲಕಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲದೇ ಇರುವುದರಿಂದ ವೃದ್ದರು ಹಾಗೂ ಹಿರಿಯ ನಾಗರಿಕರು ಗೊಂದಲಕ್ಕೆ ಸಿಲುಕಿದ್ದಾರೆ.</p>.<p>ಸಪ್ನಾ ಸ್ವೀಟ್ ಬಳಿ ಹಾಗೂ ಎದುರುಗಡೆಯ ನಗರಸಭೆ ವಾಣಿಜ್ಯ ಸಂಕಿರ್ಣದ ಬಳಿ ಬಸ್ ಹತ್ತಲು ಇಳಿಯಲು ಸ್ವಲ್ಪ ಸಮಯಾವಕಾಶ ನೀಡಬೇಕು. ನಿರ್ವಾಹಕರು ಹಾಗೂ ಚಾಲಕರು ಅವಸರ ಮಾಡಬಾರದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಮೂಲ ಸೌಕರ್ಯ ಕಲ್ಪಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯ.</p>.<p>ಈಗಾಗಲೇ ಬಸ್ ಡಿಪೋ ಬಳಿ ಗುರುತಿಸಲಾಗಿರುವ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಬಸ್ಗಳು ಬಂದು ಹೋಗಲು ಪ್ರಾರಂಭಿಸಿದ್ದು, ಇಲ್ಲಿಯೂ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಡಾಂಬರೀಕರಣ ಅಥವಾ ಕಾಂಕ್ರೀಟ್ ಹಾಕಿಸಿ ದೂಳಿನಿಂದ ಮುಕ್ತಿ ನೀಡಬೇಕು ಎನ್ನುತ್ತಾರೆ ಜನರು.</p>.<p>ನೂತನ ಬಸ್ ನಿಲ್ದಾಣ ಕಾಮಗಾರಿಗೆ ಕನಿಷ್ಠ 2 ವರ್ಷಗಳಾದರೂ ಸಮಯ ಬೇಕು. ತಾತ್ಕಾಲಿಕ ನಿಲ್ದಾಣಗಳಲ್ಲಿ ಮೂಲಸೌಕರ್ಯ ಒದಗಿಸಿದ ನಂತರ ಬಸ್ ನಿಲ್ದಾಣ ಕಾಮಗಾರಿ ಕೈಗೊಳ್ಳಬೇಕಾಗಿತ್ತು ಎಂಬುದು ಪ್ರಯಾಣಿಕರು ಹೇಳುವ ಮಾತು.</p>.<div><blockquote>ಶೀಟ್ ಬಳಸಿ ಎರಡೂ ಕಡೆ ಮೇಲ್ಚಾವಣಿ ಮಾಡಲಾಗುವುದು. ಮತ್ತೆರೆಡು ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಗಮನ ಹರಿಸಲಾಗುವುದು. </blockquote><span class="attribution">– ಕೃಷ್ಣಪ್ಪ, ಡಿಪೋ ವ್ಯವಸ್ಥಾಪಕ</span></div>.<div><blockquote>ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು, ಕೆಲವು ದಿನ ಕಿರಿಕಿರಿಯಾಗುತ್ತದೆ. ಮೂಲಸೌಕರ್ಯಗಳ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, 2 ದಿನಗಳಲ್ಲಿ ಸರಿಪಡಿಸಲಾಗುತ್ತದೆ. </blockquote><span class="attribution">– ಕೆ.ಎಂ. ಶಿವಲಿಂಗೇಗೌಡ, ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>