<p><strong>ಕೊಣನೂರು</strong>: ಕೆಲ ದಿನಗಳಿಂದ ಹದ ಮಳೆ ಸುರಿಯತ್ತಿರುವುದರಿಂದ ಹೊಗೆಸೊಪ್ಪು ನಾಟಿಯು ಉತ್ಸಾಹದಿಂದ ಸಾಗಿದೆ.</p>.<p>ಅರಕಲಗೂಡು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿನ ಬೆಲೆ ಕುಸಿದಿದ್ದರೂ, ಈ ವರ್ಷ ಹೊಗೆಸೊಪ್ಪು ಕೃಷಿಗಾಗಿ ನಾಟಿಯು ಉತ್ಸಾಹದಿಂದ ಸಾಗಿರುವುದು ವಿಶೇಷ ಎನಿಸಿದೆ.</p>.<p>ಹೆಚ್ಚು ತಂಬಾಕು ಉತ್ಪಾದಿಸುವ ಕೊಣನೂರು ಮತ್ತು ರಾಮನಾಥಪುರ ಹೋಬಳಿಯ ವ್ಯಾಪ್ತಿಯಲ್ಲಿ ಒಂದು ವಾರದಿಂದ ಹದಮಳೆಯು ಸುರಿಯುತ್ತಿರುವುದರಿಂದ ಮಳೆಯಾಶ್ರಿತ ಜಮೀನಿನ ಹೊಗೆಸೊಪ್ಪು ಬೆಳೆಗಾರರು ನಾಟಿಯಲ್ಲಿ ನಿರತರಾಗಿದ್ದಾರೆ.</p>.<p>ನೀರಾವರಿ ವ್ಯವಸ್ಥೆಯಿರುವ ಬೆಳೆಗಾರರು ಈಗಾಗಲೇ ಹೊಗೆಸೊಪ್ಪು ನಾಟಿ ಮುಗಿಸಿ, ಸಸಿಗಳ ಆರೈಕೆಯಲ್ಲಿ ನಿರತರಾಗಿದ್ದಾರೆ. ಹದ ಮಳೆಗೆ ಕಾಯುತ್ತಿದ್ದ ಜಮೀನಿನಲ್ಲಿ ನಾಟಿಯು ವಾರದಿಂದ ಭರದಿಂದ ಸಾಗಿದೆ.</p>.<p>ತಂಬಾಕು ಖರೀದಿಯ ದರವು ಗಣನೀಯವಾಗಿ ಇಳಿಕೆಯಾಗಿದ್ದರೂ ಲೆಕ್ಕಿಸದ ಬೆಳೆಗಾರರು ಪ್ರತಿ ವರ್ಷದಂತೆ ಕಳೆದೆರಡು ತಿಂಗಳಿಂದ ಬೆಳೆಸಿದ್ದ ಸಸಿಗಳ ನಾಟಿ ಮಾಡುವಲ್ಲಿ ಮಗ್ನರಾಗಿದ್ದಾರೆ.</p>.<p>ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2024–25 ನೇ ಸಾಲಿನ ತಂಬಾಕು ಖರೀದಿಯು ಪ್ರಾರಂಭದ ದಿನಗಳಲ್ಲಿ ಪ್ರತಿ ಉತ್ಕೃಷ್ಟ ದರ್ಜೆಯ ಹೊಗೆಸೊಪ್ಪು ಪ್ರತಿ ಕೆ.ಜಿ.ಗೆ ಗರಿಷ್ಠ ₹322 ದೊರಕಿತ್ತು. ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸಿದ ನಂತರ ದಿಢೀರ್ ಇಳಿಕೆಯಾಗಿ ₹270 ತಲುಪಿತು.</p>.<p>ನಂತರದ ದಿನಗಳಲ್ಲಿ ಬೆರಣಿಕೆಯಷ್ಟು ಬೇಲ್ಗಳನ್ನು ಮಾತ್ರ ₹300 ಕ್ಕೂ ಹೆಚ್ಚಿನ ಬೆಲೆಗೆ ಕೊಳ್ಳುತ್ತಿದ್ದು, ಕಡಿಮೆ ದರ್ಜೆಯ ಹೊಗೆಸೊಪ್ಪನ್ನು ಪ್ರತಿ ಕೆ.ಜಿ.ಗೆ ₹100 ದರದಲ್ಲಿ ಖರೀದಿಸಲಾಗುತ್ತಿದೆ. ಇದರಿಂದ ಸರಾಸರಿ ಬೆಲೆ ಕುಸಿದಿದ್ದು, ಬೆಳೆಗಾರರಿಗೆ ಹೆಚ್ಚಿನ ನಷ್ಟವಾಗುತ್ತಿದೆ. ತಂಬಾಕು ಮಂಡಳಿಯು ನೀಡಿರುವ ತಂಬಾಕು ಬೆಳೆಯ ಪರವಾನಗಿಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ತಂಬಾಕು ಬೆಳೆಯಲು ಮುಂದಾಗಿದ್ದೇವೆ ಎನ್ನುತ್ತಿದ್ದಾರೆ ಬೆಳೆಗಾರರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-36-235605230</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಣನೂರು</strong>: ಕೆಲ ದಿನಗಳಿಂದ ಹದ ಮಳೆ ಸುರಿಯತ್ತಿರುವುದರಿಂದ ಹೊಗೆಸೊಪ್ಪು ನಾಟಿಯು ಉತ್ಸಾಹದಿಂದ ಸಾಗಿದೆ.</p>.<p>ಅರಕಲಗೂಡು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿನ ಬೆಲೆ ಕುಸಿದಿದ್ದರೂ, ಈ ವರ್ಷ ಹೊಗೆಸೊಪ್ಪು ಕೃಷಿಗಾಗಿ ನಾಟಿಯು ಉತ್ಸಾಹದಿಂದ ಸಾಗಿರುವುದು ವಿಶೇಷ ಎನಿಸಿದೆ.</p>.<p>ಹೆಚ್ಚು ತಂಬಾಕು ಉತ್ಪಾದಿಸುವ ಕೊಣನೂರು ಮತ್ತು ರಾಮನಾಥಪುರ ಹೋಬಳಿಯ ವ್ಯಾಪ್ತಿಯಲ್ಲಿ ಒಂದು ವಾರದಿಂದ ಹದಮಳೆಯು ಸುರಿಯುತ್ತಿರುವುದರಿಂದ ಮಳೆಯಾಶ್ರಿತ ಜಮೀನಿನ ಹೊಗೆಸೊಪ್ಪು ಬೆಳೆಗಾರರು ನಾಟಿಯಲ್ಲಿ ನಿರತರಾಗಿದ್ದಾರೆ.</p>.<p>ನೀರಾವರಿ ವ್ಯವಸ್ಥೆಯಿರುವ ಬೆಳೆಗಾರರು ಈಗಾಗಲೇ ಹೊಗೆಸೊಪ್ಪು ನಾಟಿ ಮುಗಿಸಿ, ಸಸಿಗಳ ಆರೈಕೆಯಲ್ಲಿ ನಿರತರಾಗಿದ್ದಾರೆ. ಹದ ಮಳೆಗೆ ಕಾಯುತ್ತಿದ್ದ ಜಮೀನಿನಲ್ಲಿ ನಾಟಿಯು ವಾರದಿಂದ ಭರದಿಂದ ಸಾಗಿದೆ.</p>.<p>ತಂಬಾಕು ಖರೀದಿಯ ದರವು ಗಣನೀಯವಾಗಿ ಇಳಿಕೆಯಾಗಿದ್ದರೂ ಲೆಕ್ಕಿಸದ ಬೆಳೆಗಾರರು ಪ್ರತಿ ವರ್ಷದಂತೆ ಕಳೆದೆರಡು ತಿಂಗಳಿಂದ ಬೆಳೆಸಿದ್ದ ಸಸಿಗಳ ನಾಟಿ ಮಾಡುವಲ್ಲಿ ಮಗ್ನರಾಗಿದ್ದಾರೆ.</p>.<p>ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2024–25 ನೇ ಸಾಲಿನ ತಂಬಾಕು ಖರೀದಿಯು ಪ್ರಾರಂಭದ ದಿನಗಳಲ್ಲಿ ಪ್ರತಿ ಉತ್ಕೃಷ್ಟ ದರ್ಜೆಯ ಹೊಗೆಸೊಪ್ಪು ಪ್ರತಿ ಕೆ.ಜಿ.ಗೆ ಗರಿಷ್ಠ ₹322 ದೊರಕಿತ್ತು. ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸಿದ ನಂತರ ದಿಢೀರ್ ಇಳಿಕೆಯಾಗಿ ₹270 ತಲುಪಿತು.</p>.<p>ನಂತರದ ದಿನಗಳಲ್ಲಿ ಬೆರಣಿಕೆಯಷ್ಟು ಬೇಲ್ಗಳನ್ನು ಮಾತ್ರ ₹300 ಕ್ಕೂ ಹೆಚ್ಚಿನ ಬೆಲೆಗೆ ಕೊಳ್ಳುತ್ತಿದ್ದು, ಕಡಿಮೆ ದರ್ಜೆಯ ಹೊಗೆಸೊಪ್ಪನ್ನು ಪ್ರತಿ ಕೆ.ಜಿ.ಗೆ ₹100 ದರದಲ್ಲಿ ಖರೀದಿಸಲಾಗುತ್ತಿದೆ. ಇದರಿಂದ ಸರಾಸರಿ ಬೆಲೆ ಕುಸಿದಿದ್ದು, ಬೆಳೆಗಾರರಿಗೆ ಹೆಚ್ಚಿನ ನಷ್ಟವಾಗುತ್ತಿದೆ. ತಂಬಾಕು ಮಂಡಳಿಯು ನೀಡಿರುವ ತಂಬಾಕು ಬೆಳೆಯ ಪರವಾನಗಿಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ತಂಬಾಕು ಬೆಳೆಯಲು ಮುಂದಾಗಿದ್ದೇವೆ ಎನ್ನುತ್ತಿದ್ದಾರೆ ಬೆಳೆಗಾರರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-36-235605230</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>