<p><strong>ಅರಕಲಗೂಡು:</strong> ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಆರಂಭಿಸುವ ಮೊದಲು ಯುಜಿಡಿ, ಕುಡಿಯುವ ನೀರು, ಹಾಗೂ ಗ್ಯಾಸ್ ಪೈಪ್ಲೈನ್ ಅಳವಡಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಶಾಸಕ ಎ. ಮಂಜು ಸೂಚಿಸಿದರು.</p>.<p>ಪಟ್ಟಣದ 2ನೇ ವಾರ್ಡಿನಲ್ಲಿ ಭಾನುವಾರ ₹11 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p> ಹೊಸದಾಗಿ ರಸ್ತೆ ನಿರ್ಮಿಸಿದ ಬೆನ್ನಲ್ಲೇ ವಿವಿಧ ಕಾಮಗಾರಿಗಳಿಗಾಗಿ ಅಗೆಯುವ ಕಾರಣ ಹಾಳಾಗಿ ಜನರು ಕಿರಿಕಿರಿ ಅನುಭವಿಸಬೇಕಿದೆ. ರಸ್ತೆ ನಿರ್ಮಾಣ ಪ್ರಾರಂಭಿಸುವ ಮುನ್ನವೇ ಇಲ್ಲಿ ಆಗಬೇಕಾದ ಅಗತ್ಯ ಕಾಮಗಾರಿಗಳು ಪೂರ್ಣಗೊಂಡಿವೆಯೇ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.</p>.<p> ಹಾಸನ ಪಿಯು ಕಾಲೇಜು ಪಕ್ಕದ ರಸ್ತೆ ಹಾಳಾಗಿದ್ದು, ಅಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಸ್ಥಳೀಯ ಕೌನ್ಸಿಲರ್ ಮನವಿ ಮಾಡಿದ್ದರು. ಅದರಂತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. </p>.<p>ಮುಖಂಡರಾದ ನರಸೇಗೌಡ, ಗಾಂಧಿನಗರ ದಿವಾಕರ್, ಮುತ್ತಿಗೆ ರಾಜೇಗೌಡ, ಎಚ್.ಎಸ್.ರಶ್ಮಿ ಪ್ರವೀಣ್, ಸುಮಿತ್ರ, ಅನಿಕೇತನ್, ಹೂವಣ್ಣ, ಅಲೀಂ ಪಾಷ, ಸಣ್ಣಸ್ವಾಮಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಕಲಗೂಡು:</strong> ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಆರಂಭಿಸುವ ಮೊದಲು ಯುಜಿಡಿ, ಕುಡಿಯುವ ನೀರು, ಹಾಗೂ ಗ್ಯಾಸ್ ಪೈಪ್ಲೈನ್ ಅಳವಡಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಶಾಸಕ ಎ. ಮಂಜು ಸೂಚಿಸಿದರು.</p>.<p>ಪಟ್ಟಣದ 2ನೇ ವಾರ್ಡಿನಲ್ಲಿ ಭಾನುವಾರ ₹11 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p> ಹೊಸದಾಗಿ ರಸ್ತೆ ನಿರ್ಮಿಸಿದ ಬೆನ್ನಲ್ಲೇ ವಿವಿಧ ಕಾಮಗಾರಿಗಳಿಗಾಗಿ ಅಗೆಯುವ ಕಾರಣ ಹಾಳಾಗಿ ಜನರು ಕಿರಿಕಿರಿ ಅನುಭವಿಸಬೇಕಿದೆ. ರಸ್ತೆ ನಿರ್ಮಾಣ ಪ್ರಾರಂಭಿಸುವ ಮುನ್ನವೇ ಇಲ್ಲಿ ಆಗಬೇಕಾದ ಅಗತ್ಯ ಕಾಮಗಾರಿಗಳು ಪೂರ್ಣಗೊಂಡಿವೆಯೇ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.</p>.<p> ಹಾಸನ ಪಿಯು ಕಾಲೇಜು ಪಕ್ಕದ ರಸ್ತೆ ಹಾಳಾಗಿದ್ದು, ಅಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಸ್ಥಳೀಯ ಕೌನ್ಸಿಲರ್ ಮನವಿ ಮಾಡಿದ್ದರು. ಅದರಂತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. </p>.<p>ಮುಖಂಡರಾದ ನರಸೇಗೌಡ, ಗಾಂಧಿನಗರ ದಿವಾಕರ್, ಮುತ್ತಿಗೆ ರಾಜೇಗೌಡ, ಎಚ್.ಎಸ್.ರಶ್ಮಿ ಪ್ರವೀಣ್, ಸುಮಿತ್ರ, ಅನಿಕೇತನ್, ಹೂವಣ್ಣ, ಅಲೀಂ ಪಾಷ, ಸಣ್ಣಸ್ವಾಮಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>