‘ಸಾಮಾಜಿಕ ಸಮಾನತೆ: ಸಾಧನೆಯೊಂದೇ ನೇರದಾರಿ’ (ಸಂಪಾದಕೀಯ, ಏ. 4) ಎಂಬ ಬರಹವು ಸಾಮಾಜಿಕ ನ್ಯಾಯದ ಕಣ್ಣು ತೆರೆಸಲು ಸಹಕಾರಿಯಾಗಿದೆ. ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವಂತಹ ಸಲಹೆಯನ್ನು ಸುಪ್ರೀಂ ಕೋರ್ಟ್ ನೀಡಿದೆ. ಇದರಿಂದಾಗಿ ಸಹಜವಾಗಿ ದಲಿತರು ಭಯಭೀತರಾಗಿದ್ದಾರೆ. ದಲಿತರ ರಕ್ಷಣೆಗೆ ಆಧಾರವಾಗಿದ್ದ ಕಾಯ್ದೆಯ ಕಂಬವನ್ನೇ ಕಡಿದು ಹಾಕಿದಂತಾಗಿದೆ. ಇಂತಹ ಸಂದರ್ಭದಲ್ಲಿ ‘ಪ್ರಜಾವಾಣಿ’ಯ ಸಂಪಾದಕೀಯ ದಲಿತ