<p><strong>ಬೇಲೂರು:</strong> ತಾಲ್ಲೂಕಿನ ಸೆಸ್ಕ್ ಇಲಾಖೆಯವರು ರೈತರಿಗೆ ತೊಂದರೆಯಾಗುವಂತೆ ಕಳಪೆಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತಸಂಘದ ಪ್ರಮುಖರು ಹಾಗೂ ಕಾಫಿ ಬೆಳೆಗಾರರು ಪಟ್ಟಣದ ಸೆಸ್ಕ್ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.</p>.<p>ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆತಡೆ ನಡೆಸಿದ ನಂತರ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಬಾಗಿಲು ಬಂದ್ ಮಾಡಿ, ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತರು. ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.</p>.<p>ರೈತ ಸಂಘದ ಜಿಲ್ಲಾಘಟಕದ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, ಬೇಸಿಗೆ ಹಂಗಾಮು ಸಮೀಪಿಸುತ್ತಿದ್ದು, ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ತೊಳಲು ವಿದ್ಯುತ್ ಘಟಕದಲ್ಲಿ 5.30 ಗಂಟೆಯ ಅವಧಿಯಲ್ಲಿ 19 ಬಾರಿ ವಿದ್ಯುತ್ ಕಡಿತಗೊಳಿಸಲಾಗಿದೆ. ರೈತರು ಒಂದೆರಡು ಕಿ.ಮೀ.ದೂರದಲ್ಲಿ ಜಮೀನು ಇಟ್ಟುಕೊಂಡು, ವಿದ್ಯುತ್ ಬಂದಾಗ ಮೋಟಾರ್ ಆನ್ ಮಾಡಲು ಹೋಗುವುದು ಹೇಗೆ ಎಂದು ಪ್ರಶ್ನಿಸಿದರು.</p>.<p>ಗೆಂಡೇಹಳ್ಳಿ ವಿದ್ಯುತ್ ಘಟಕದಲ್ಲಿ ಒಂದೇ ಟಿಸಿ ಇರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಹೆಚ್ಚುವರಿಯಾಗಿ ಟಿಸಿ ಅಳವಡಿಸಲು ಒಂದು ವರ್ಷದ ಹಿಂದೆಯೇ ಪ್ರತಿಭಟನೆ ಮೂಲಕ ಮನವಿ ಮಾಡಿದರೂ ಕೇವಲ ಭರವಸೆ ಹೊರತು ಬೇರೇನೂ ಆಗಿಲ್ಲ. ಟಿಸಿ ಅಳವಡಿಸಲು ಟೆಂಡರ್ ಕರೆದಿದ್ದರೂ ಯಾರೂ ಟೆಂಡರ್ನಲ್ಲಿ ಭಾಗವಹಿಸಿಲ್ಲ ಎಂದರು.</p>.<p>ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬೋಗಮಲ್ಲೇಶ್ ಮಾತನಾಡಿ, ಕಳೆದ ವರ್ಷ ಚಳವಳಿ ಮಾಡಿದ ಸಂದರ್ಭದಲ್ಲಿ ಒಂದು ತಿಂಗಳಲ್ಲಿ ಸಮಸ್ಯೆ ಬಗ್ಗೆ ಹರಿಸುವುದಾಗಿ ಅಧಿಕಾರಿಗಳು ಹೇಳಿದ್ದರೂ ಸಮಸ್ಯೆ ಬಗ್ಗೆಹರಿದಿಲ್ಲ. ನಮ್ಮಗೆ ನೀರು ಹಾಯಿಸಲು ಮೂರು ತಿಂಗಳೂ ಅಷ್ಟೆ ವಿದ್ಯುತ್ ಬೇಕಿರುವುದು, ಆ ನಂತರ ಬೇಕಾಗಿಲ್ಲ, ಸಮಸ್ಯೆ ಬಗ್ಗೆಹರಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.</p>.<p>ಗೆಂಡೇಹಳ್ಳಿ ವಿದ್ಯುತ್ ಉಪಕೇಂದ್ರಕ್ಕೆ ಹೆಚ್ಚುವರಿ ಟ್ರಾನ್ಸ್ಫಾರ್ಮರ್ ತಂದಿರುವುದಾಗಿ ಎಐಸಿಸಿ ಸದಸ್ಯ ಬಿ.ಶಿವರಾಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ನಾವು ಚಳುವಳಿ ನಡೆಸಿದ ನಂತರ ಅವರು ಹೇಳಿಕೆ ನೀಡಿದ್ದಾರೆ. 11 ತಿಂಗಳು ಸಮಯವಿತ್ತಲ್ಲ, ಆದರೂ ಕೆಲಸವೆಕೆ ಆಗಿಲ್ಲ. ಶಿವರಾಂ ಹೇಳುತ್ತಿರುವುದು ಸುಳ್ಳು. ಬೇಲೂರಿನಲ್ಲಿ ಆಮದು ಗಿರಾಕಿಗಳು ಹೆಚ್ಚಾಗಿದ್ದು, ಕೈಗಾರಿಕೆಗಳಿಗೆ ಹಗಲು ವಿದ್ಯುತ್ ಸರಬರಾಜು ಮಾಡಿ, ರೈತರಿಗೆ ರಾತ್ರಿ ವಿದ್ಯುತ್ ನೀಡುತ್ತಿರುವ ಬಗ್ಗೆ ಯಾವ ರಾಜಕಾರಣಿಗಳು ಮಾತಾಡುತ್ತಿಲ್ಲ. ಬೇಲೂರನ್ನು ಎಲ್ಲ ಪಕ್ಷದ ರಾಜಕಾರಣಿಗಳು ಸಹ ಗುತ್ತಿಗೆ ಪಡೆದಿರುವ ರೀತಿ ಮಾತನಾಡುತ್ತಿದ್ದಾರೆ ಎಂದು ಬಳ್ಳೂರು ಸ್ವಾಮಿಗೌಡ ಕಿಡಿಕಾರಿದರು.</p>.<p>ಕೆಪಿಟಿಸಿಎಲ್ ಮುಖ್ಯ ಎಂಜಿನಿಯರ್ ಆದಿಶೇಷ ಸಮಸ್ಯೆಯನ್ನು ಹದಿನೈದು ದಿನದೊಳಗೆ ಬಗ್ಗೆಹರಿಸುವುದಾಗಿ ಲಿಖಿತವಾಗಿ ಪತ್ರ ನೀಡಿದ ನಂತರ ಧರಣಿ ನಿಲ್ಲಿಸಲಾಯಿತು.</p>.<p>ಪ್ರಮುಖರಾದ ಬಸವರಾಜು, ಸಚಿನ್, ಬಿರಟೆಮನೆ ಸುರೇಶ್, ಜಿ.ಕೆ.ಕುಮಾರ್, ಮುತ್ತುಗನ್ನೆ ಮಲ್ಲಿಕಾರ್ಜುನ್, ವೈ.ಎಸ್.ಸಿದ್ದೇಗೌಡ, ಚಂದ್ರಶೇಖರ್, ತಾರಾನಾಥ್, ನಂಜಪ್ಪ, ತೊಳಲು ಮೋಹನ್, ಸುರೇಶ್, ವೆಂಕಟೇಶ್, ರಂಗನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇಲೂರು:</strong> ತಾಲ್ಲೂಕಿನ ಸೆಸ್ಕ್ ಇಲಾಖೆಯವರು ರೈತರಿಗೆ ತೊಂದರೆಯಾಗುವಂತೆ ಕಳಪೆಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತಸಂಘದ ಪ್ರಮುಖರು ಹಾಗೂ ಕಾಫಿ ಬೆಳೆಗಾರರು ಪಟ್ಟಣದ ಸೆಸ್ಕ್ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.</p>.<p>ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆತಡೆ ನಡೆಸಿದ ನಂತರ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಬಾಗಿಲು ಬಂದ್ ಮಾಡಿ, ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತರು. ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.</p>.<p>ರೈತ ಸಂಘದ ಜಿಲ್ಲಾಘಟಕದ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, ಬೇಸಿಗೆ ಹಂಗಾಮು ಸಮೀಪಿಸುತ್ತಿದ್ದು, ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ತೊಳಲು ವಿದ್ಯುತ್ ಘಟಕದಲ್ಲಿ 5.30 ಗಂಟೆಯ ಅವಧಿಯಲ್ಲಿ 19 ಬಾರಿ ವಿದ್ಯುತ್ ಕಡಿತಗೊಳಿಸಲಾಗಿದೆ. ರೈತರು ಒಂದೆರಡು ಕಿ.ಮೀ.ದೂರದಲ್ಲಿ ಜಮೀನು ಇಟ್ಟುಕೊಂಡು, ವಿದ್ಯುತ್ ಬಂದಾಗ ಮೋಟಾರ್ ಆನ್ ಮಾಡಲು ಹೋಗುವುದು ಹೇಗೆ ಎಂದು ಪ್ರಶ್ನಿಸಿದರು.</p>.<p>ಗೆಂಡೇಹಳ್ಳಿ ವಿದ್ಯುತ್ ಘಟಕದಲ್ಲಿ ಒಂದೇ ಟಿಸಿ ಇರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಹೆಚ್ಚುವರಿಯಾಗಿ ಟಿಸಿ ಅಳವಡಿಸಲು ಒಂದು ವರ್ಷದ ಹಿಂದೆಯೇ ಪ್ರತಿಭಟನೆ ಮೂಲಕ ಮನವಿ ಮಾಡಿದರೂ ಕೇವಲ ಭರವಸೆ ಹೊರತು ಬೇರೇನೂ ಆಗಿಲ್ಲ. ಟಿಸಿ ಅಳವಡಿಸಲು ಟೆಂಡರ್ ಕರೆದಿದ್ದರೂ ಯಾರೂ ಟೆಂಡರ್ನಲ್ಲಿ ಭಾಗವಹಿಸಿಲ್ಲ ಎಂದರು.</p>.<p>ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬೋಗಮಲ್ಲೇಶ್ ಮಾತನಾಡಿ, ಕಳೆದ ವರ್ಷ ಚಳವಳಿ ಮಾಡಿದ ಸಂದರ್ಭದಲ್ಲಿ ಒಂದು ತಿಂಗಳಲ್ಲಿ ಸಮಸ್ಯೆ ಬಗ್ಗೆ ಹರಿಸುವುದಾಗಿ ಅಧಿಕಾರಿಗಳು ಹೇಳಿದ್ದರೂ ಸಮಸ್ಯೆ ಬಗ್ಗೆಹರಿದಿಲ್ಲ. ನಮ್ಮಗೆ ನೀರು ಹಾಯಿಸಲು ಮೂರು ತಿಂಗಳೂ ಅಷ್ಟೆ ವಿದ್ಯುತ್ ಬೇಕಿರುವುದು, ಆ ನಂತರ ಬೇಕಾಗಿಲ್ಲ, ಸಮಸ್ಯೆ ಬಗ್ಗೆಹರಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.</p>.<p>ಗೆಂಡೇಹಳ್ಳಿ ವಿದ್ಯುತ್ ಉಪಕೇಂದ್ರಕ್ಕೆ ಹೆಚ್ಚುವರಿ ಟ್ರಾನ್ಸ್ಫಾರ್ಮರ್ ತಂದಿರುವುದಾಗಿ ಎಐಸಿಸಿ ಸದಸ್ಯ ಬಿ.ಶಿವರಾಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ನಾವು ಚಳುವಳಿ ನಡೆಸಿದ ನಂತರ ಅವರು ಹೇಳಿಕೆ ನೀಡಿದ್ದಾರೆ. 11 ತಿಂಗಳು ಸಮಯವಿತ್ತಲ್ಲ, ಆದರೂ ಕೆಲಸವೆಕೆ ಆಗಿಲ್ಲ. ಶಿವರಾಂ ಹೇಳುತ್ತಿರುವುದು ಸುಳ್ಳು. ಬೇಲೂರಿನಲ್ಲಿ ಆಮದು ಗಿರಾಕಿಗಳು ಹೆಚ್ಚಾಗಿದ್ದು, ಕೈಗಾರಿಕೆಗಳಿಗೆ ಹಗಲು ವಿದ್ಯುತ್ ಸರಬರಾಜು ಮಾಡಿ, ರೈತರಿಗೆ ರಾತ್ರಿ ವಿದ್ಯುತ್ ನೀಡುತ್ತಿರುವ ಬಗ್ಗೆ ಯಾವ ರಾಜಕಾರಣಿಗಳು ಮಾತಾಡುತ್ತಿಲ್ಲ. ಬೇಲೂರನ್ನು ಎಲ್ಲ ಪಕ್ಷದ ರಾಜಕಾರಣಿಗಳು ಸಹ ಗುತ್ತಿಗೆ ಪಡೆದಿರುವ ರೀತಿ ಮಾತನಾಡುತ್ತಿದ್ದಾರೆ ಎಂದು ಬಳ್ಳೂರು ಸ್ವಾಮಿಗೌಡ ಕಿಡಿಕಾರಿದರು.</p>.<p>ಕೆಪಿಟಿಸಿಎಲ್ ಮುಖ್ಯ ಎಂಜಿನಿಯರ್ ಆದಿಶೇಷ ಸಮಸ್ಯೆಯನ್ನು ಹದಿನೈದು ದಿನದೊಳಗೆ ಬಗ್ಗೆಹರಿಸುವುದಾಗಿ ಲಿಖಿತವಾಗಿ ಪತ್ರ ನೀಡಿದ ನಂತರ ಧರಣಿ ನಿಲ್ಲಿಸಲಾಯಿತು.</p>.<p>ಪ್ರಮುಖರಾದ ಬಸವರಾಜು, ಸಚಿನ್, ಬಿರಟೆಮನೆ ಸುರೇಶ್, ಜಿ.ಕೆ.ಕುಮಾರ್, ಮುತ್ತುಗನ್ನೆ ಮಲ್ಲಿಕಾರ್ಜುನ್, ವೈ.ಎಸ್.ಸಿದ್ದೇಗೌಡ, ಚಂದ್ರಶೇಖರ್, ತಾರಾನಾಥ್, ನಂಜಪ್ಪ, ತೊಳಲು ಮೋಹನ್, ಸುರೇಶ್, ವೆಂಕಟೇಶ್, ರಂಗನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>