ತರಕಾರಿ ಬೆಳೆಗೂ ಹಿನ್ನಡೆ
ಹಳೇಬೀಡು ಭಾಗದ ತರಕಾರಿಗೆ ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಾರೆ. ವಿದ್ಯುತ್ ಅಭಾವ ಹಾಗೂ ಬಿಸಿಲಿನ ತಾಪದಿಂದ ತರಕಾರಿ ಬೆಳೆ ಉಳಿಸಿಕೊಳ್ಳುವುದು ಸುಲಭ ಸಾಧ್ಯವಾಗಿಲ್ಲ. ಈ ವರ್ಷ ಶುಂಠಿ ಆಸಕ್ತರು ಮಾತ್ರ ಕೃಷಿ ಕಾಯಕಕ್ಕೆ ಕೈಹಾಕಿದ್ದಾರೆ. ಎಲೆಕೋಸು, ಟೊಮೆಟೊ, ಮೆಣಸಿನಕಾಯಿ, ಬದನೆಕಾಯಿ ಮೊದಲಾದ ತರಕಾರಿ ಬೆಳೆಯುವ ಬಹುತೇಕ ರೈತರು ಬೇಸಾಯದಿಂದ ಹಿಂದೆ ಸರಿದಿದ್ದಾರೆ ಎಂದು ರೈತ ಓಂಕಾರಪ್ಪ ಹೇಳಿದರು.