<p>ಬೇಲೂರು: ತಾಲ್ಲೂಕಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿದ್ದ ಒಂಟಿ ಕೋರೆ ಕಾಡಾನೆಯನ್ನು ಶನಿವಾರ ಸೆರೆ ಹಿಡಿಯಲಾಯಿತು. ಜಿಲ್ಲೆಯಲ್ಲಿ ಇದೇ ಮೊದಲಿಗೆ ಕಾರ್ಯಾಚರಣೆಗೆ ಶ್ವಾನದಳ ಬಳಕೆ ಮಾಡಲಾಗಿದೆ.</p>.<p>ಏ.12ರಂದು ಕಣಗುಪ್ಪೆಯಲ್ಲಿ ರಾಜಶೆಟ್ಟಿ ಅವರನ್ನು ಬಲಿ ಪಡೆದಿದ್ದ ಕಾಡಾನೆ, ಏ.15ರಂದು ಸೆರೆ ಸಿಕ್ಕಿತ್ತಾದರೂ, ಮತ್ತೆ ಪರಾರಿಯಾಗಿತ್ತು. ಶುಕ್ರವಾರ ಕಾರ್ಯಾಚರಣೆ ನಡೆಸಿದರೂ ಪತ್ತೆ ಆಗಿರಲಿಲ್ಲ.</p>.<p>ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆ ಪತ್ತೆಗೆ, ವಿಶೇಷ ತರಬೇತಿ ಪಡೆದಿದ್ದ ಬಂಡಿಪುರ ‘ಈಶ’ ಹೆಸರಿನ ಶ್ವಾನದ ನೆರವು ಪಡೆದರು. ಶನಿವಾರ ಬೆಳಿಗ್ಗೆ ಕಾಡಾನೆ ನೆಲೆಯನ್ನು ಶ್ವಾನದ ಸಹಾಯದಿಂದ ಪತ್ತೆ ಮಾಡಿದರು.</p>.<p>ಒಂಟಿ ಕೋರೆ ಆನೆ, ಇನ್ನೊಂದು ದೈತ್ಯ ಕಾಡಾನೆ ‘ಕ್ಯಾಪ್ಟನ್’ ಜೊತೆಯಲ್ಲಿಯೇ ಇತ್ತು. ಕುಮ್ಕಿ ಆನೆಗಳೊಂದಿಗೆ ತೆರಳಿದ ಪಶು ವೈದ್ಯರು ಅರಿವಳಿಕೆ ಚುಚ್ಚುಮದ್ದು ನೀಡಿದರು.</p>.<p>ನಂತರ ಎರಡೂ ಕಾಡಾನೆಗಳನ್ನು ಬೇರೆ ಮಾಡಲಾಯಿತು. ಒಂಟಿ ಕೋರೆ ಕಾಡಾನೆ ಸ್ವಲ್ಪ ದೂರ ಓಡಿ, ಪ್ರಜ್ಞೆ ತಪ್ಪಿತ್ತು. ಕುಮ್ಕಿ ಆನೆಗಳು ಕಾಡಾನೆಯನ್ನು ಸುತ್ತುವರಿದವು. ಇಟಿಎಫ್ ಹಾಗೂ ಅರಣ್ಯ ಸಿಬ್ಬಂದಿ ಬಳಿಕ ಸೆರೆ ಹಿಡಿದ ಕಾಡಾನೆಯನ್ನು ಲಾರಿ ಮೂಲಕ ಸ್ಥಳಾಂತರಿಸಿದರು.</p>.<p>‘ಡಿಸಿಎಫ್ ಸೌರಭ್ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು ಭಾನುವಾರ ಎರಡು ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗುವುದು’ ಎಂದು ಆರ್ಎಫ್ಒ ಯತೀಶ್ ಅವರು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-51-1378761416</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೇಲೂರು: ತಾಲ್ಲೂಕಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿದ್ದ ಒಂಟಿ ಕೋರೆ ಕಾಡಾನೆಯನ್ನು ಶನಿವಾರ ಸೆರೆ ಹಿಡಿಯಲಾಯಿತು. ಜಿಲ್ಲೆಯಲ್ಲಿ ಇದೇ ಮೊದಲಿಗೆ ಕಾರ್ಯಾಚರಣೆಗೆ ಶ್ವಾನದಳ ಬಳಕೆ ಮಾಡಲಾಗಿದೆ.</p>.<p>ಏ.12ರಂದು ಕಣಗುಪ್ಪೆಯಲ್ಲಿ ರಾಜಶೆಟ್ಟಿ ಅವರನ್ನು ಬಲಿ ಪಡೆದಿದ್ದ ಕಾಡಾನೆ, ಏ.15ರಂದು ಸೆರೆ ಸಿಕ್ಕಿತ್ತಾದರೂ, ಮತ್ತೆ ಪರಾರಿಯಾಗಿತ್ತು. ಶುಕ್ರವಾರ ಕಾರ್ಯಾಚರಣೆ ನಡೆಸಿದರೂ ಪತ್ತೆ ಆಗಿರಲಿಲ್ಲ.</p>.<p>ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆ ಪತ್ತೆಗೆ, ವಿಶೇಷ ತರಬೇತಿ ಪಡೆದಿದ್ದ ಬಂಡಿಪುರ ‘ಈಶ’ ಹೆಸರಿನ ಶ್ವಾನದ ನೆರವು ಪಡೆದರು. ಶನಿವಾರ ಬೆಳಿಗ್ಗೆ ಕಾಡಾನೆ ನೆಲೆಯನ್ನು ಶ್ವಾನದ ಸಹಾಯದಿಂದ ಪತ್ತೆ ಮಾಡಿದರು.</p>.<p>ಒಂಟಿ ಕೋರೆ ಆನೆ, ಇನ್ನೊಂದು ದೈತ್ಯ ಕಾಡಾನೆ ‘ಕ್ಯಾಪ್ಟನ್’ ಜೊತೆಯಲ್ಲಿಯೇ ಇತ್ತು. ಕುಮ್ಕಿ ಆನೆಗಳೊಂದಿಗೆ ತೆರಳಿದ ಪಶು ವೈದ್ಯರು ಅರಿವಳಿಕೆ ಚುಚ್ಚುಮದ್ದು ನೀಡಿದರು.</p>.<p>ನಂತರ ಎರಡೂ ಕಾಡಾನೆಗಳನ್ನು ಬೇರೆ ಮಾಡಲಾಯಿತು. ಒಂಟಿ ಕೋರೆ ಕಾಡಾನೆ ಸ್ವಲ್ಪ ದೂರ ಓಡಿ, ಪ್ರಜ್ಞೆ ತಪ್ಪಿತ್ತು. ಕುಮ್ಕಿ ಆನೆಗಳು ಕಾಡಾನೆಯನ್ನು ಸುತ್ತುವರಿದವು. ಇಟಿಎಫ್ ಹಾಗೂ ಅರಣ್ಯ ಸಿಬ್ಬಂದಿ ಬಳಿಕ ಸೆರೆ ಹಿಡಿದ ಕಾಡಾನೆಯನ್ನು ಲಾರಿ ಮೂಲಕ ಸ್ಥಳಾಂತರಿಸಿದರು.</p>.<p>‘ಡಿಸಿಎಫ್ ಸೌರಭ್ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು ಭಾನುವಾರ ಎರಡು ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗುವುದು’ ಎಂದು ಆರ್ಎಫ್ಒ ಯತೀಶ್ ಅವರು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-51-1378761416</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>