ತಿರುವನಂತಪುರಂ: ಕಳೆದ ವರ್ಷ ಮೇ 7, ಭಾನುವಾರದಂದು ಮಸೀದಿಯಲ್ಲಿ ಪಾರ್ಥನೆ ಮುಗಿಸಿ ಹೊರಬಂದಾಗ ಮುಹಮ್ಮದ್ ನವಾಜ್ ಅವರಿಗೆ ಶಿವಗಿರಿ ಶಾಲೆ ಮುಂದೆ ಹಲವಾರು ಮಂದಿ ಕಾಯುತ್ತಾ ಕುಳಿತಿರುವುದು ಕಂಡಿತ್ತು. ನೀಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೋಷಕರು ಪರೀಕ್ಷೆ ಮುಗಿಯುವವರೆಗೆ ಬಿಸಿಲಿನಲ್ಲಿ ಕಾಯುತ್ತಾ ಕುಳಿತಿರುವುದನ್ನು ಕಂಡ ನವಾಜ್ ಅವರನ್ನೆಲ್ಲ ಮಸೀದಿಗೆ ಆಹ್ವಾನಿಸಿ, ಅಲ್ಲಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ವಾದಿ ಹಿರಾ ಟ್ರಸ್ಟ್ ನ ಕಾರ್ಯದರ್ಶಿಯಾಗಿದ್ದ ನವಾಜ್, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೋಷಕರಿಗೆ ಮಸೀದಿಯಲ್ಲಿ ಆತಿಥ್ಯ ನೀಡಿದ್ದರು.