ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೈಸೂರಿನಲ್ಲಿ ಖಾಸಗಿ ಸಂಸ್ಥೆಗಳು ಚರ್ಚೆಗೆ ವೇದಿಕೆ ಸಿದ್ಧಪಡಿಸಿದ್ದವು. ನಾನೂ ಆಹ್ವಾನ ನೀಡಿದ್ದೆ. ಬೇರೆ ಯಾರೂ ಬೇಡ ನಾನು ಅವರು ಇಬ್ಬರೇ ಚರ್ಚೆಯಲ್ಲಿ ಇರುತ್ತೇವೆ. ರಾಮಾಯಣ ಕುರಿತು ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಆದರೆ, ಅವರು ಬಹಿರಂಗ ಚರ್ಚೆಗೆ ಬರಲಿಲ್ಲ. ಜತೆಗೆ ಸರ್ಕಾರ ಅದಕ್ಕೆ ಅನುಮತಿ ಕೊಡಲಿಲ್ಲ’ ಎಂದು ತಿಳಿಸಿದರು.