ಹಾಸನ ಹೊರ ವಲಯದ ಕೆ.ಕೆ.ರೆಸಿಡೆನ್ಸಿಯಲ್ಲಿ ನಾರಾಯಣಗೌಡ ಮತ್ತು ಹೇಮಂತ್ ಎಂಬುವರು ತಲಾ ₹ 500 ಮುಖಬೆಲೆಯ ₹ 2 ಲಕ್ಷಕ್ಕೂ ಅಧಿಕ ಹಣ ಇಟ್ಟುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಕೆ.ಆರ್.ಪುರಂ ಪೋಲೀಸರು ದಾಳಿ ನಡೆಸಿ, ಹಣ, ಬಿಜೆಪಿ ಪಕ್ಷಕ್ಕೆ ಸಂಬಂಧಪಟ್ಟ ಕರಪತ್ರಗಳು, ದೇವರ ಫೋಟೋಗಳನ್ನು ವಶಕ್ಕೆ ಪಡೆದರು.