‘ಸರ್ಕಾರಿ ಜಾಗ ರಕ್ಷಣೆಗೆ ಕಠಿಣ ಕಾನೂನು ಜಾರಿಗೆ ತರುವಂತೆ ವಿಧಾನಸೌಧದಲ್ಲಿ ಪ್ರಬಲ ಧ್ವನಿ ಎತ್ತಿರುವ ನಾನು, ಸಿಎ (ಉದ್ಯಾನಕ್ಕೆ ಮೀಸಲಿಟ್ಟಿದ್ದ) ಜಾಗ ಕಬಳಿಸಲು ಸಾಧ್ಯವೇ? ನಿವೇಶನ ಖರೀದಿಸುವ ಎಲ್ಲರೂ ಕಡ್ಡಾಯವಾಗಿ ನಗರ ಯೋಜನಾ ಅಧಿಕಾರಿಗಳಿಂದ ದಾಖಲೆ ಪಡೆಯಬೇಕೆಂಬ ನಿಯಮ 1997 ರಲ್ಲಿ ಜಾರಿಗೆ ಬಂದಿತು. ಆದರೆ, 1991ರಲ್ಲಿಯೇ ನಿವೇಶನ ಖರೀದಿಸಿದ್ದರಿಂದ ಆ ಕೆಲಸ ಮಾಡಲಿಲ್ಲ. ಸಿದ್ದರಾಮಶೆಟ್ಟಿ ಅವರು ತಮ್ಮ ಒಟ್ಟು 5.4 ಎಕರೆ ಜಮೀನಿನಲ್ಲಿ 1 ಎಕರೆ 10 ಗುಂಟೆಯಂತೆ ನಾಲ್ಕು ಭಾಗಗಳಾಗಿ ಬಡಾವಣೆ ನಿರ್ಮಿಸಿದ್ದಾರೆ. ಅದರಲ್ಲಿ ಸಿಎ ಜಾಗ ಬಿಡಲಾಗಿದೆ. ಅಲ್ಲಿ ಗಣಪತಿ ದೇವಾಲಯ ಹಾಗೂ ಉದ್ಯಾನ ನಿರ್ಮಿಸಲಾಗಿದೆ. ನಾನು ಕಟ್ಟಿರುವ ಮನೆ ಸಿಎ ಜಾಗವಾಗಿದ್ದರೆ ಬಿಟ್ಟುಕೊಡಲು ಸಿದ್ದ’ ಎಂದು ಹೇಳಿದರು.