‘ಬಿಸಿಲೆ ಅರಣ್ಯ ಪಟ್ಲಾ, ಮಂಕನಹಳ್ಳಿ, ಕುಮಾರ ಪರ್ವತ ಬೆಟ್ಟಕ್ಕೆ ಹೊಂದಿಕೊಂಡಿದೆ. ಸುತ್ತಮುತ್ತ ಬೆಟ್ಟಗುಡ್ಡ, ಕುರುಚಲು ಗಿಡ, ನೀಲಗಿರಿ ತೋಪು ಒಳಗೊಂಡಿದೆ. ಹೊರ ಜಿಲ್ಲೆಯಲ್ಲಿ ಸೆರೆ ಹಿಡಿದ ಚಿರತೆಗಳನ್ನು ಬಿಸಲೆ ಅರಣ್ಯಕ್ಕೆ ಬಿಡಲಾಗುತ್ತಿದೆ. ಅವುಗಳನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು’ ಎಂದು ಬಿಸಲೆ ಅರಣ್ಯ ಭವನದ ಮುಂದೆ ಕೆಲ ದಿನಗಳ ಹಿಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.