ಚನ್ನರಾಯಪಟ್ಟಣ: ರಾಷ್ಟ್ರೀಯ ಹೆದ್ದಾರಿಯಲ್ಲಿ ಜೋಡಿಗಟ್ಟೆ- ಹಿರಿಹಳ್ಳಿ ಸಮೀಪ ಮೋಟರ್ ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ ಮತ್ತು 7 ವರ್ಷದ ಬಾಲಕ ಸ್ಥಳದಲ್ಲಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ದಂಡಿಗನಹಳ್ಳಿ ಹೋಬಳಿ ದೊಡ್ಡಕರಡೆ ಗ್ರಾಮದ ಧರಣೇಶ್ (32) ಮತ್ತು ಪುತ್ರ ಪ್ರೀತಂ (7) ಮೃತರು. ಬೈಕಿನಲ್ಲಿ ಉದಯಪುರದಿಂದ ತಮ್ಮೂರಿಗೆ ತೆರಳುತ್ತಿದ್ದಾಗ ಬೆಂಗಳೂರಿನಿಂದ ಹಾಸನದ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಚಾಲಕ ಪರಾರಿಯಾಗಿದ್ದು, ಕಾರನ್ನು ವಶಕ್ಕೆ ತೆಗೆದುಕೊಳ್ಳಲಾ ಗಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.