ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ರಥೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ವಿವಾದವೂ ಈ ಬಾರಿ ಎದ್ದಿತ್ತು. ಆದರೆ, ಜಿಲ್ಲಾಡಳಿತ ರಥೋತ್ಸವ ವೇಳೆ ಅಂಗಡಿ ಹಾಕುವುದಕ್ಕೆ ಮುಸ್ಲಿಮರಿಗೆಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ಹಾಗಾಗಿ ಅರಸೀಕೆರೆ, ಬಾಳೆ ಹೊನ್ನೂರು,ಚಿಕ್ಕಮಗಳೂರು, ಹಳೇಬೀಡು, ಕಡೂರು ಭಾಗದ ಮುಸ್ಲಿಮರು ಹಾಗೂ ಸ್ಥಳೀಯರು ಅಂಗಡಿಗಳನ್ನು ತೆರೆದು, ಯಾವುದೇ ತಾರತಮ್ಯ ಇಲ್ಲದೇ ವ್ಯಾಪಾರ ನಡೆಸಿದರು.