ಸಕಲೇಶಪುರ: ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಡಿಕೊಂಡಿರುವ ಪ್ರಕರಣ ಸೋಮವಾರ ರಾತ್ರಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಲಸುಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶ್ ನಗರ ಬಡಾವಣೆಯಿಂದ ಸ್ಪರ್ಧಿಸಿರುವ ಬಾಗೇಶ್ ಮೇಲೆ ಅದೇ ಗ್ರಾಮದ ಸ್ನೇಹಿತರಾದ ಪ್ರವೀಣ್, ಆಶ್ರಫ್, ಇಬ್ರಾಹಿಂ ಹಾಗೂ ಆರೀಫ್ ಹಲ್ಲೆ ಮಾಡಿದ್ದಾರೆ.
ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಬಾಗೇಶ್ ಹಾಗೂ ಇತರರು ಪರಸ್ಪರ ಹೊಡೆದಾಡಿಕೊಂಡಿರುವುದಕ್ಕೂ ಗ್ರಾಮ ಪಂಚಾಯಿತಿ ಚುನಾವಣೆಗೂ ಸಂಬಂಧ ಇಲ್ಲ. ಬಾಗೇಶ್ ಇಡೀ ದಿನ ಮತಗಟ್ಟೆ ಬಳಿ ಆರಾಮವಾಗಿ ಇದ್ದಾರೆ. ಪ್ರವೀಣ್ ತಲೆ ಮರೆಸಿಕೊಂಡಿದ್ದು, ಉಳಿದವರನ್ನು ಬಂಧಿಸಲಾಗಿದೆ’ ಎಂದು ಇನ್ಸ್ಪೆಕ್ಟರ್ ಗಿರೀಶ್ ಹೇಳಿದರು.