<p>ಚನ್ನರಾಯಪಟ್ಟಣ: ಜಾನುವಾರುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮ್ಯಾಟ್ಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.</p>.<p>ಪಟ್ಟಣದ ಹೊರವಲಯದ ಶೆಟ್ಟಿಹಳ್ಳಿಡೇರಿಯಲ್ಲಿ ಶನಿವಾರ ಹೈನುಗಾರರಿಗೆ₹ 1.50 ಕೋಟಿ ಮೌಲ್ಯದ 6 ಸಾವಿರ ಮ್ಯಾಟ್ಗಳನ್ನು ವಿತರಿಸಿ ಮಾತನಾಡಿದರು.</p>.<p>280 ಹಾಲಿನ ಡೇರಿ ವ್ಯಾಪ್ತಿಯಲ್ಲಿ ಆರು ಸಾವಿರ ಮ್ಯಾಟ್ಗಳನ್ನು ವಿತರಿಸಲಾಗುತ್ತಿದೆ. ಕೊಟ್ಟಿಗೆಯಲ್ಲಿ ಶುಚಿತ್ವ ಹಾಗು ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಇದು ಉತ್ತಮವಾಗಿದೆ. ಈ ಹಿಂದೆಯೂ 15-20 ಸಾವಿರ ಮ್ಯಾಟ್ಗಳನ್ನು ವಿತರಿಸಲಾಗಿತ್ತು. ಇನ್ನೂ 20 ಸಾವಿರ ಮ್ಯಾಟ್ಗಳಿಗೆ ಬೇಡಿಕೆ ಇದೆ. ಟೆಂಡರ್ ಕರೆದು ಏಪ್ರಿಲ್ ನಂತರ ಎರಡನೇ ಹಂತದಲ್ಲಿ 10 ಸಾವಿರ ಮ್ಯಾಟ್ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.</p>.<p>ಡೇರಿ ಕಟ್ಟಡ ನಿರ್ಮಿಸಲು ಇ-ಸ್ವತ್ತು ಸಮಸ್ಯೆ ಇದೆ. ಪರವಾನಗಿ ಮತ್ತು ಇ-ಸ್ವತ್ತನ್ನು ಸರಳೀಕರಣ ಮಾಡುವಂತೆ ವಿಧಾನಸಭೆಯ ಕಲಾಪದಲ್ಲಿ ಪ್ರಸ್ತಾಪಿಸಲಾಗಿದೆ. ಇ-ಸ್ವತ್ತು ಸರಳೀಕರಣ ಮಾಡುವುದರಿಂದ ಕಟ್ಟಡ ನಿರ್ಮಿಸಲು ಅನುಕೂಲವಾಗಲಿದೆ. ಪ್ರತಿಯೊಬ್ಬ ರೈತರು, ಜಾನುವಾರುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಜಾನುವಾರು ಮೃತಪಟ್ಟರೆ ರೈತರಿಗೆ ₹ 60ಸಾವಿರ ಪರಿಹಾರ ದೊರಕುತ್ತದೆ. ಅದೇ ರೀತಿ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಸಾಲ ಪಡೆದಿರುವ 18-40 ವರ್ಷದೊಳಗಿನ ರೈತರು ವಾರ್ಷಿಕ ₹ 437 ವಿಮೆ ಪಾವತಿಸಬೇಕು. ಸ್ವಾಭಾವಿಕವಾಗಿ ಮೃತಪಟ್ಟರೆ ಕೇಂದ್ರ ಸರ್ಕಾರದಿಂದ ₹ 2 ಲಕ್ಷ ವಿಮೆ ಪರಿಹಾರ ಲಭಿಸಲಿದೆ ಎಂದು ತಿಳಿಸಿದರು.</p>.<p>ಹಾಸನದಲ್ಲಿ ಮೆಗಾ ಡೇರಿ ಶೀಘ್ರ ಉದ್ಘಾಟನೆಯಾಗಲಿದೆ. ಹಾಲು ಉತ್ಪಾದಕರ ಹಿತ ಕಾಪಾಡುವುದು ಮುಖ್ಯ. ರಾಜ್ಯದಲ್ಲಿ ಹಾಲಿನ ಉತ್ಪಾದನೆಯಲ್ಲಿ ಚನ್ನರಾಯಟ್ಟಣ ತಾಲ್ಲೂಕು ನಾಲ್ಕನೇ ಸ್ಥಾನದಲ್ಲಿದೆ. ಹಾಸನ, ಕನಕಪುರ, ಚನ್ನಪಟ್ಟಣ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದೆ ಎಂದು ಹೇಳಿದರು.</p>.<p>ನಿರ್ದೇಶಕಿ ಕೆ.ವಿ. ವಸಂತಮ್ಮ, ಎಂಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಎಚ್. ಶಿವಣ್ಣ, .ವಿ.ಎನ್. ಮಂಜುನಾಥ್, ಅಧಿಕಾರಿಗಳಾದ ಕೃಷ್ಣಮೂರ್ತಿ, ದಯಾನಂದ್, ಯೋಗೀಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-36-1446130177</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚನ್ನರಾಯಪಟ್ಟಣ: ಜಾನುವಾರುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮ್ಯಾಟ್ಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.</p>.<p>ಪಟ್ಟಣದ ಹೊರವಲಯದ ಶೆಟ್ಟಿಹಳ್ಳಿಡೇರಿಯಲ್ಲಿ ಶನಿವಾರ ಹೈನುಗಾರರಿಗೆ₹ 1.50 ಕೋಟಿ ಮೌಲ್ಯದ 6 ಸಾವಿರ ಮ್ಯಾಟ್ಗಳನ್ನು ವಿತರಿಸಿ ಮಾತನಾಡಿದರು.</p>.<p>280 ಹಾಲಿನ ಡೇರಿ ವ್ಯಾಪ್ತಿಯಲ್ಲಿ ಆರು ಸಾವಿರ ಮ್ಯಾಟ್ಗಳನ್ನು ವಿತರಿಸಲಾಗುತ್ತಿದೆ. ಕೊಟ್ಟಿಗೆಯಲ್ಲಿ ಶುಚಿತ್ವ ಹಾಗು ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಇದು ಉತ್ತಮವಾಗಿದೆ. ಈ ಹಿಂದೆಯೂ 15-20 ಸಾವಿರ ಮ್ಯಾಟ್ಗಳನ್ನು ವಿತರಿಸಲಾಗಿತ್ತು. ಇನ್ನೂ 20 ಸಾವಿರ ಮ್ಯಾಟ್ಗಳಿಗೆ ಬೇಡಿಕೆ ಇದೆ. ಟೆಂಡರ್ ಕರೆದು ಏಪ್ರಿಲ್ ನಂತರ ಎರಡನೇ ಹಂತದಲ್ಲಿ 10 ಸಾವಿರ ಮ್ಯಾಟ್ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.</p>.<p>ಡೇರಿ ಕಟ್ಟಡ ನಿರ್ಮಿಸಲು ಇ-ಸ್ವತ್ತು ಸಮಸ್ಯೆ ಇದೆ. ಪರವಾನಗಿ ಮತ್ತು ಇ-ಸ್ವತ್ತನ್ನು ಸರಳೀಕರಣ ಮಾಡುವಂತೆ ವಿಧಾನಸಭೆಯ ಕಲಾಪದಲ್ಲಿ ಪ್ರಸ್ತಾಪಿಸಲಾಗಿದೆ. ಇ-ಸ್ವತ್ತು ಸರಳೀಕರಣ ಮಾಡುವುದರಿಂದ ಕಟ್ಟಡ ನಿರ್ಮಿಸಲು ಅನುಕೂಲವಾಗಲಿದೆ. ಪ್ರತಿಯೊಬ್ಬ ರೈತರು, ಜಾನುವಾರುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಜಾನುವಾರು ಮೃತಪಟ್ಟರೆ ರೈತರಿಗೆ ₹ 60ಸಾವಿರ ಪರಿಹಾರ ದೊರಕುತ್ತದೆ. ಅದೇ ರೀತಿ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಸಾಲ ಪಡೆದಿರುವ 18-40 ವರ್ಷದೊಳಗಿನ ರೈತರು ವಾರ್ಷಿಕ ₹ 437 ವಿಮೆ ಪಾವತಿಸಬೇಕು. ಸ್ವಾಭಾವಿಕವಾಗಿ ಮೃತಪಟ್ಟರೆ ಕೇಂದ್ರ ಸರ್ಕಾರದಿಂದ ₹ 2 ಲಕ್ಷ ವಿಮೆ ಪರಿಹಾರ ಲಭಿಸಲಿದೆ ಎಂದು ತಿಳಿಸಿದರು.</p>.<p>ಹಾಸನದಲ್ಲಿ ಮೆಗಾ ಡೇರಿ ಶೀಘ್ರ ಉದ್ಘಾಟನೆಯಾಗಲಿದೆ. ಹಾಲು ಉತ್ಪಾದಕರ ಹಿತ ಕಾಪಾಡುವುದು ಮುಖ್ಯ. ರಾಜ್ಯದಲ್ಲಿ ಹಾಲಿನ ಉತ್ಪಾದನೆಯಲ್ಲಿ ಚನ್ನರಾಯಟ್ಟಣ ತಾಲ್ಲೂಕು ನಾಲ್ಕನೇ ಸ್ಥಾನದಲ್ಲಿದೆ. ಹಾಸನ, ಕನಕಪುರ, ಚನ್ನಪಟ್ಟಣ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದೆ ಎಂದು ಹೇಳಿದರು.</p>.<p>ನಿರ್ದೇಶಕಿ ಕೆ.ವಿ. ವಸಂತಮ್ಮ, ಎಂಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಎಚ್. ಶಿವಣ್ಣ, .ವಿ.ಎನ್. ಮಂಜುನಾಥ್, ಅಧಿಕಾರಿಗಳಾದ ಕೃಷ್ಣಮೂರ್ತಿ, ದಯಾನಂದ್, ಯೋಗೀಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-36-1446130177</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>