ಚನ್ನರಾಯಪಟ್ಟಣಕ್ಕೆ ಹೋಗುವವರು ಸೂರನಹಳ್ಳಿ ರೈಲ್ವೆ ಗೇಟ್ ದಾಟಿ ಹೋಗಬೇಕು. ಈ ಗೇಟ್ಗೆ ಹೋಗಲು ಮೈಸೂರು ಕಡೆಯಿಂದ ಬರುವ ವಾಹನಗಳು ಬಸ್ ನಿಲ್ದಾಣದ ಸಮೀಪ ಇರುವ ಅಂಬೇಡ್ಕರ್ ವೃತ್ತದಲ್ಲಿ ಎಡಕ್ಕೆ ತಿರುಗಿ ಗಾಂಧೀವೃತ್ತದ ಮೂಲಕ ಅರಕಲಗೂಡು ರಸ್ತೆಯಲ್ಲಿ ಸ್ವಲ್ಪ ದೂರ ಸಾಗಬೇಕು. ನಂತರ ಅಂಚೆ ಕಚೇರಿ ಸಮೀಪ ಬಲಕ್ಕೆ ತಿರುಗಿ ರಿವರ್ ಬ್ಯಾಂಕ್ ರಸ್ತೆ ಚನ್ನಾಂಬಿಕ ವೃತ್ತದ ಮೂಲಕ ಸೂರನಹಳ್ಳಿ ಗೇಟ್ ಮೂಲಕ ಚನ್ನರಾಯಪಟ್ಟಣ ರಸ್ತೆಗೆ ತಿರುಗಬೇಕು . ಇಲ್ಲವೇ ಬಸವ ಭವನ ರಸ್ತೆ ಕಡೆ ತಿರುಗಿ ಬೈಪಾಸ್ ರಸ್ತೆಯ ಮೂಲಕ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಸ್ತೆಯಲ್ಲಿ ಸಾಗಿ ಚನ್ನರಾಯಪಟ್ಟಣಕ್ಕೆ ಹೋಗಬೇಕು ಎಂದು ಆಟೋ ವರ್ಕ್ಸ್ ಮಾಲೀಕ ಮುಜಾಹಿದ್ ಹೇಳಿದರು. .