ನಗರದ ಹೊರವಲಯದ ಸೋಮನಹಳ್ಳಿ ಬಳಿಯ ನಾಗರಾಜು ಎಂಬುವರ ಕೋಳಿ ಫಾರಂ ಗೆ ಮಧ್ಯರಾತ್ರಿ 1.30ರ ಸಮಯದಲ್ಲಿ ನುಗ್ಗಿದ ಚಿರತೆ ಎರಡು ಕುರಿ ಹಾಗೂ ಒಂದು ಕರುವಿನ ಕುತ್ತಿಗೆ ಭಾಗಕ್ಕೆ ಬಾಯಿ ಹಾಕಿ ರಕ್ತಹೀರಿ ಸಾಯಿಸಿದೆ. ದನಕರುಗಳ ಚೀರಾಟ ಕೇಳಿ ನಾಗರಾಜು, ಅವರ ಪತ್ನಿ ಶಾಂತಮ್ಮ ಫಾರಂ ಒಳಗೆ ಹೋದಾಗ ಗಾಬರಿಯಿಂದ ಚಿರತೆ ಅಲ್ಲಿಂದ ಓಡಿ ಹೋಗಿದೆ.