‘ಕೌಟುಂಬಿಕ ಸಮಸ್ಯೆ ಸರಿಪಡಿಸು, ಮಾಡಿರುವ ಸಾಲ ಬೇಗ ತೀರುವಂತೆ ಮಾಡು, ಮದುವೆ ಮಾಡಿಸು, ಹಣಕಾಸು ಸಮಸ್ಯೆ ಬಗೆಹರಿಸು ತಾಯೆ, ಒಳ್ಳೆ ಕೆಲಸ ಕೊಡಿಸು, ಗಂಡ ಮಕ್ಕಳನ್ನು ಕಾಪಾಡು. ನನ್ನ ಕೆಲಸ ಪರ್ಮನೆಂಟ್ ಆಗಲಿ, ಕೊರೊನಾ ಮಹಾಮಾರಿ ಹೋಗಲಾಡಿಸು, ಮನೆ ಕಟ್ಟುವಂತೆ ಮಾಡು’ ಎಂದು ಹಲವರು ಕೈ ಬರಹದ ಪತ್ರಗಳ ಮೂಲಕ ನಿವೇದನೆ ಮಾಡಿಕೊಂಡಿದ್ದಾರೆ