ಸಿ.ಡಿ.ಪಿ.ಓ ದಿಲೀಪ್ ಹಾಗೂ ಎಪಿಎಂಸಿ ಕಾರ್ಯದರ್ಶಿ ಸುಧೀಂದ್ರ ನೇತೃತ್ವದ ತಂಡ ಮಾಹಿತಿ ಪಡೆಯಲು ಬಂದ ವೇಳೆ ಅವರು ಸರಿಯಾದ ಮಾಹಿತಿ ನೀಡಿಲ್ಲ. ಸ್ಥಳೀಯರು ಕೇರಳದಿಂದ ಬಂದಿದ್ದಾರೆ ಎಂದರೆ, ಮನೆಯವರು ಪಾಳ್ಯ ಸಮೀಪದ ಗ್ರಾಮದಿಂದ ಬಂದಿದ್ದಾರೆ ಎಂದು ವಾದಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಮನೆಯವರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. bಳಿಕ ಅಧಿಕಾರಿಗಳು ಮೂವರ ಕೈಗೆ ಹೋಂ ಕ್ವಾರಂಟೈನ್ ಮುದ್ರೆ ಹಾಕಿದರು.