ನಿವೃತ್ತ ಪ್ರಾಧ್ಯಾಪಕ ಎಚ್.ಎಲ್.ಮಲ್ಲೇಶ್ಗೌಡ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಗಂಜಲಗೂಡು ಗೋಪಾಲಗೌಡ, ಶಿಕ್ಷಕಿ ಮಮತಾ ಅರಸೀಕೆರೆ, ಪತ್ರಕರ್ತರಾದ ರವಿ ನಾಕಲಗೋಡು, ಆರ್.ಕೆ.ಶರ್ಮಾ ಸೇರಿದಂತೆ ಐವರು ಕಣದಲ್ಲಿದ್ದಾರೆ. ವೈಯಕ್ತಿಕ ಕಾರಣಕ್ಕೆ ಆರ್.ಕೆ.ಶರ್ಮಾ ಕಣದಿಂದ ನಿವೃತ್ತರಾಗಿದ್ದರೆ, ಮಮತಾ ಅವರು ಕೆಲಸದ ಒತ್ತಡದಿಂದ ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ.